From Raghavendra’s Dhaba – Bread Upma

Left over bread pieces in kitchen? Or you are craving for some company with your Coffee/Tea?

You bought a pound of bread, and noone ate the top and bottom pieces. Also while making sandwiches for your children, they want the edges of bread-slices to be taken off. So you are left with a few bread slices and some other leftover edge pieces. Instead of throwing them as useless and uneatable, here is a recipe to put them to good use. The recipe is not just for leftovers, but can be used for good and fresh bread as well!

Ingredients:

Bread pieces/slices – 2 large cups (approx 100 Gms), cut into bite sizes

Onion – 1 medium (finely chopped)

Tomato – 1 medium (finely chopped)

Green chilies – 5 (slit in the middle)

Curry leaves – 5 leaves

Urad dal – 1 Tsp

Mustard seeds – 1 Tsp

Ground nuts -10 to 15 (Or use 7 to 8 cashews)

Turmeric Powder – 5g

Ginger paste, Salt, Sugar – 1 Tsp

Coriander (for garnishing)

Oil – 3 TblSp

Optional: Hing (1/2 Tsp), Lemon juice. You can use ginger garlic paste as well instead of ginger paste.

Preparation:

Heat 1 Table spoon of oil in a deep dish. Slow roast the bread pieces to make them crisp. Keep it aside.

Heat 1 more table spoon of oil, and roast the ground nuts/cashews and keep them aside.

Hear the last tablespoon of oil. Sputter mustard seeds and urad dal. Saute till the dal turns light golden.

Add green chilies and curry leaves. Saute for 30 seconds.

Sprinkle hing. Add onions and saute till they golden. Add ginger paste. Saute for 30 more seconds.

Tomatoes go in now. After 30 seconds of frying add salt, turmeric. Fry till tomatoes turn mushy.

Noe add chili powder and sugar. Add 3 to 4 tablespoons of water. Cook for a minute. Check the taste. Adjust salt or chili if needed.

Add the bread pieces and ground nuts/cashews. Mix well to make sure each bread piece is coated with the masala. Cook for 20-30 seconds.

Sprinkle coriander leaves and lemon juice and serve hot.

IMG_1176

 

From Raghavendra’s Dhaba – Andhra Curry Leaves Chicken

Don’t drink that beer alone….give it some company!

You want a hot friend to join your chilled beer. Look no more!

Ingredients:

WhatsApp Image 2020-05-04 at 4.44.01 PM

For Marination:

Chicken – 300 Gms

Curd – 3 Tablespoons

Salt – 5g

Turmeric Powder – 5g

Ginger garlic paste – 2 Tsp

For the dish:

Onion – 3 large

Garlic – 1 bulb (loosely chopped)

Ginger – 2 inch (finely chopped)

Green chilies – 5 (slit in the middle)

Cinnamon stick – 3 inch

Black Pepper 0 1 TblSpn

Cardamom – 3

Cloves – 3

Red Chilli Powder, Coriander Powder, Garam Masala – 1 TblSpn

Turmeric – 1 Tsp

Curry leaves – 25 leaves

Coriander (for garnishing)

Oil – 3 TblSp

Preparation:

Firstly, the usual….marinating the chicken. Mix the chicken in curd, a pinch each of salt, turmeric and red chili powder. Longer the marination the better. Any marination less than 2 hours is useless.

Dice the onions and boil them in water for 3-4 minutes. Make a paste of this boiled onions. This is going to stink a bit. But it is worth it.

Heat oil in the pan. First goes the cinnamon stick, cloves, black pepper and cardamom. Then add green chilies, chopped ginger and garlic. After a minute add the curry leaves. Fry for 30-40 seconds, and then add the onion paste. Saute till the oil separates. Add the masala powders, and 2 spoons of water (not more than that). Give it a roll, add the chicken and salt. Close the lid and cook for 5 minutes. Chicken will leave some water and get cooked.

Open the lid and cook for 5 more minutes. Keep mixing the contents. This is to make sure all the water evaporates and dish becomes dry. Garnish with finely chopped coriander leaves.

WhatsApp Image 2020-05-04 at 6.10.41 PM

Serve hot with chilled beer!

P.S: If you are not a fan of boiled onion (and the smell), you can saute the onions with some mustard seeds and grind to a paste.

From Raghavendra’s Dhaba – Paneer Butter Masala

For the taste lovers, but “non that spicy dish please” kind of people

You thought Paneer Butter Masala it too difficult to make? Think again!

Ingredients:

Paneer – 300 Gms

Onions and Tomato – 2 medium each

Red chilies – 5 Long

Cashews – 5 whole

Heavy Cream – 1 cup

Fennel Seeds – 1 Tsp

Kasuri Methi – 1 Tsp

Salt and Sugar – 1.5 Tsps

Garam Masala – 1 Tsp

Ghee – 3 TbleSp

Preparation:

Make sure Paneer is kept out of freezer for atleast 30 minutes. Prick it with a toothpick, and it should go in and come out easily, without breaking either of them 🙂 Then the Paneer is ready.

Get the pan heated with 1 spoon of Ghee. Sputter the fennel seeds, red chilies, cashews and then goes in the Onions. Season it with a pinch of salt and fry for 2 minutes (high flame).

WhatsApp Image 2020-04-30 at 12.22.57 PM

Add tomatoes and again a pinch of salt. You can close the lid and cook for 3 minutes (high flame). Let the contents cool down. Once cool, grind it to a fine paste.

WhatsApp Image 2020-04-30 at 12.22.58 PM

Heat 2 spoons of ghee. Add the ground masala and cook it till the raw smells goes away. Add the garam masala and mix well. Add Paneer and cook for 3-4 minutes with lid closed. Add cream and cook for one last minute. Add the sugar. Check for salt and add extra if needed. Sprinkle Kasurti Methi on top. Give it a stir and close the lid. Switch of the stove and leave the vessel on the cooking top for next 5 minutes.

WhatsApp Image 2020-04-30 at 12.22.59 PM

Best with Chapati, but who am I to stop you to have it with rice!

From Raghavendra’s Dhaba – Chicken Joshila

An easy dry/gravy recipe with a red-wine twist

Ingredients:

WhatsApp Image 2020-05-11 at 7.58.04 PM

For Marination:

Chicken – 300 Gms

Curd – 3 Tablespoons

Salt – 5g

Turmeric Powder – 5g

Ginger garlic paste – 2 Tsp

For Main Dish:

Onion – 1  Medium sized (Finely chopped)

Tomato – 1 Medium sized (Diced)

Garlic – 5 buds

Ginger – 2 inch

Cumin powder, Coriander Powder, Garam Masala, , Turmeric – 1 Teaspoon each

Red Chili Powder – 1 1/2 Tablespoon

Red wine – 60 ml

Salt – As per your taste

Oil/Ghee – 2 Tablespoon

Coriander and Grated Coconut – 1 fistful

Preparation:

Marinate the Chicken in curd, Ginger garlic paste, a pinch each of salt, turmeric and chili powder. Longer the marination the better. Minimum marination of 2 hours is required.

Chicken, Marinated

In a pan, heat 2 tablespoon of ghee and fry the chopped onion. Once the onions are brown, add crushed garlic buds and chopped ginger. After 2 minutes add tomatoes and salt. Cook in medium flame for 5-10 minutes. Let tomatoes be reduced and a thick gravy starts forming. Add Cumin powder, Coriander powder, Garam masala and the red chilli powder. Add 2-3 spoons of water.

WhatsApp Image 2020-05-11 at 7.58.05 PM

Add the red wine, and let it sizzle it for a minute.

WhatsApp Image 2020-05-11 at 7.58.06 PM

Add the chicken, mix well. Close the lid and let it cook for 12-15 minutes. Add freshly chopped coriander leaves and grated coconut.

If you want it as a gravy/semi gravy item, your dish is ready. If you want a dry item, cook on medium flame for 5 more minutes without the lid.

*Viola* that is your Chicken Joshila.

WhatsApp Image 2020-05-11 at 7.58.07 PM

Are background extras so important in a movie?

Yes, extras are very very important to build the narrative in a scene, and a genius director can make the character speak through the extras, while the main actor in focus can remain silent.

Shawshank Redemption - Brooks

Take a look at this picture from The Shawshank Redemption (1994) – IMDb,a perfect and mind-blowing use of extras.

Brooks just got out of prison after many many years. He is feeling so lonely and terrified. The emotion gets pumped to our subconscious as all the extras in the bus look away from Brooks, they all look sideways, making him look even lonelier than usual.

A good director uses the extras to provoke some emotion inside us, and not just use them to make the scene be more realistic and beautiful.

Mind=Blown

ಸ್ನೇಹಿತರಲ್ಲೊಂದು ಅರಿಕೆ – 15ನೇ ಏಪ್ರಿಲ್ 2020

ಎಲ್ಲರಿಗೂ ನಮಸ್ಕಾರ,

ಕೆಲ ಕ್ಷುಲ್ಲಕ ಕಾರಣಗಳಿಂದಾಗಿ ಸ್ವಲ್ಪಕಾಲ ಫೇಸ್ಬುಕ್ಕಿನಿಂದ ಹೊರಬಂದಿದ್ದೇನೆ. ಕೆಲದಿನಗಳ ಹಿಂದೆ ನನ್ನ ವಿರುದ್ಧ ಕೆಲ ಏಕದೇವೋಪಾಸಕರ ಯಥಾಪ್ರಕಾರದ ಅನ್ಯಧರ್ಮದ್ವೇಷದ ಪೋಸ್ಟುಗಳನ್ನು ನೀವು ನೋಡಿರಬಹುದು. ಅವರ ಈ ಕೆಲಸಗಳು ಹೊಸದೇನೂ ಅಲ್ಲ. ಎಲ್ಲೂ ಯಾರಿಗೂ ಕಾಣದಿರುವ ಧರ್ಮದ್ವೇಷ, ಈ ಏಕದೇವೋಪಾಸಕರಿಗೆ ಕಂಡುಬರುತ್ತಪ್ಪ. ಅದ್ಯಾವನೋ ಕಾರ್ಟೂನಿಷ್ಟ್ ಕೃಷ್ಣಪ್ಪನಿಗೆ ಬೈದದ್ದೂ, ಇವರಿಗೆ ಕೃಷ್ಣನಿಗೇ ಬೈದಂತೆ ಅನಿಸಿದರೆ ಅದ್ಯಾರ ತಪ್ಪು ಮಾರಾಯ್ರೆ! ದೇವರ ಹೆಸರನ್ನೇ ಇಟ್ಟುಕೋ ಅಂತಾ ಹೇಳಿದವರ್ಯಾರು ಈ ಕೃಷ್ಣಪ್ಪನಿಗೆ? ಒಟ್ಟಿನಲ್ಲಿ ಈ ಮುಟ್ಟಿದರೆ ಮುನಿಗಳಿಗೆ ನನ್ನ ಫೇಸ್ಬುಕ್ ಪೋಸ್ಟುಗಳನ್ನು ಓದಲಿಕ್ಕೆ ಕಷ್ಟವಂತೆ. ಅದೂ ಇವರ ವರಸೆಯೆಂತದ್ದು! ಯಾರಿಗೂ ತಾರ್ಕಿಕವಾಗಿ ಮಾತಾಡುವ ಕ್ಷಮತೆಯೇ ಇಲ್ಲ. ಬಾಯಿತೆಗೆದರೆ ಸೀದಾ ಕತ್ತುಕುಯ್ಯುವ ಮಾತೇ ಮಾರಾಯ್ರೆ!!

ಇನ್ನೂ ಮಜವೆಂದರೆ ಕೆಲವರು ಬಂದು ಕ್ಷಮೆ ಕೇಳು ಎಂದರು. ಆದರೆ ಯಾರಲ್ಲಿ ಅಂತಾ ಕ್ಷಮೆ ಕೇಳುವುದು? ಇವರನ್ನೆಲ್ಲಾ ಗುತ್ತಿಗೆ ತೆಗೆದುಕೊಂಡಿರುವವರು ಯಾರು? ನಿಮ್ಮಲ್ಲಿ ಕ್ಷಮೆ ಕೇಳಲೇ ಎಂದರೆ, ನನ್ನನ್ನಲ್ಲ ಎಲ್ಲರನ್ನೂ ಕೇಳು ಅಂತಾರೆ. ಯಾರಿಗೂ ಸಹ ನಾನು ಯಾರಲ್ಲಿ ಕ್ಷಮೆ ಕೇಳಬೇಕು ಎಂಬ ಸ್ಪಷ್ಟತೆಯಿಲ್ಲ. ಯಾಕೆ ಕೇಳಬೇಕು ಎನ್ನುವ ಸ್ಪಷ್ಟತೆಯಂತೂ ಮೊದಲೇ ಇಲ್ಲ. ಹೇಗೆ ಕೇಳಬೇಕು ಎಂಬುದು ಗೊತ್ತಿಲ್ಲ. ಆದರೆ ಪೋಲೀಸರಿಗೆ ಹಿಡಿದುಕೊಡಬೇಕೆಂಬ ಉಮೇದಿದೆ. ಹೇಗೆ ಹಿಡುದುಕೊಡುತ್ತೀರಿ, ನನ್ನ ಮೇಲೆ ನಿಮ್ಮ ಬಳಿ ಏನು ಆರೋಪವಿದೆ, ಅದಕ್ಕೆ ಯಾವ ಸಾಕ್ಷಿಯಿದೆ ಅಂತಾ ಕೇಳಿದರೆ ಅದ್ಯಾವುದೋ ಹಳೆಯ ಒಂದೆರಡು ಸ್ಕ್ರೀನ್ಶಾಟುಗಳನ್ನು ಹಿಡಿದುಕೊಂಡು ಒಂದೇಸಮನೆ ಅಳುತ್ತಿದ್ದಾರೆ.

ಅದಕ್ಕೇ ಅವರ ಕಷ್ಟಗಳನ್ನು ಕಡಿಮೆಮಾಡಲಿಕ್ಕೆ ಸಧ್ಯಕ್ಕೆ ಫೇಸ್ಬುಕ್ಕನ್ನು ಸ್ಥಗಿತಗೊಳಿಸಿದ್ದೇನೆ. ಪಾಪ ಯಾಕೆ ಅವರಿಗೆ ಮತ್ತವರ ದೇವರಿಗೆ ಕಷ್ಟ!

ನಿಮ್ಮೆಲ್ಲರ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇವೆ. ಯಾವ ಗಾಬರಿಯೂ ಬೇಡ. ನಮ್ಮ ಮಾತುಕಥೆ ಇಲ್ಲೇ ಈ ಬ್ಲಾಗಿನಲ್ಲಿ ನಡೆಯಲಿ.

From Raghavendra’s Dhaba – Chicken Gravy

An easy gravy recipe for an afternoon lunch

Tired of sitting at home and in mood to cook something new? Here is a quick recipe for something that can go both with Roti or Rice.

Ingredients:

Chicken – 300 Gms

Curd – 3 Tablespoons

Cashews – 6 to 8

Onion – 1 (medium sized)

Tomato – 1 (medium sized)

Garlic – 5 buds

Ginger – 2 inch

Cumin powder, Coriander Powder, Garam Masala, , Turmeric – 1 Teaspoon each

Milk – 1/4 cup

1 Bay leaf, 5 cloves and 2 inch cinnamon stick

Red Chili Powder and Salt – As per your taste

Oil/Ghee – 2 Tablespoon

WhatsApp Image 2020-04-14 at 12.42.35 PM

Preparation:

Marinate the Chicken in curd, a pinch each of salt, turmeric and chili powder. Longer the marination the better. Also soak the cashews in milk.

In a pan, heat 1 tablespoon of ghee and fry the chopped onion and tomato, crushed garlic buds and chopped ginger. Let it cool down. Once it is cooler, grind it with soaked cashews. Instead of using water for grinding, make use of the cashew soaked milk. Make a fine paste.

Once again, heat a spoon of oil. Activate a couple of bay-leaf, cloves and cinnamon. Add the finely ground the masala, a teaspoon each of cumin powder and coriander powder and half teaspoon of garam masala powder. Depending on your taste add 1/2 to 1 tablespoon of red chili powder. Mix well and cook until the raw smell is gone. When the masala starts to leave the edges, add the marinated chicken. Mix well. Cook on medium-low flame for 20 minutes, or until done.

Enjoy the thick gravy with Chapati, Roti or Rice, with a wedge of lemon by the side.

P.S: You can use the same recipe for a veg preparation. Replace chicken with baby potatoes/cube cut potatoes, paneer and green-peas (Yes, I would still recommend marination)

WhatsApp Image 2020-04-14 at 2.22.54 PM

“ಜಾಳುಜಾಳಾದ ಜೀವನಕ್ಕೆ ದಿಕ್ಕುತೋರಿಸುವ ಜಾರ್ಜಿಯಾದ ಮಾರ್ಗಸೂಚಿಗಳು”

ಒಂದ್ಸಲ ಮಂಗಳೂರು ಏರ್ಪೋರ್ಟಿಂದ ನಾನು ದುಬೈಗೆ ಹೊರಡುವವನಿದ್ದೆ. ಸಂಜೆ 8ಕ್ಕೆ ಫ್ಲೈಟು. ಮಧ್ಯಾಹ್ನ ಒಂದಕ್ಕೇ ಶೃಂಗೇರಿಯ ಮನೆಬಿಟ್ವಿ. ನಾಲ್ಕೂವರೆಗೆಲ್ಲಾ ಏರ್ಪೋರ್ಟಿಗೆ ನನ್ನ ಬಿಟ್ಟು, ಅಪ್ಪ ಅಮ್ಮ ಪೂರ್ತಿ ಕತ್ತಲಾಗುವ ಮೊದಲು ವಾಪಾಸು ಶೃಂಗೇರಿ ತಲುಪಿಕೊಳ್ಳಬಹುದು ಅನ್ನೋ ಲೆಕ್ಕ. ಶೃಂಗೇರಿ ಬಿಟ್ಟು ಸುಮಾರು ಹದಿನೈದು ಕಿಲೋಮೀಟರ್ ಹೋಗಿರಬಹುದು, ಮನೆಯಿಂದ ತಂಗಿ ಕಾಲ್ ಮಾಡಿದ್ಲು. “ಅಣ್ಣಾ ನಿನ್ ಪಾಸ್ಪೋರ್ಟ್ ಇಲ್ಲೇ ಬಿಟ್ ಹೋಗಿದ್ಯಲ್ಲೋ!” ಅಂತಾ. ಟಿಕೇಟಾದ್ರೆ ಫೋನಲ್ಲಿರುತ್ತೆ, ಲಗೇಜ್ ಬಿಟ್ಟು ಹೋದ್ರೆ ಮುಂದಿನ ಸಲ ಬಂದಾಗ ತಗೊಂಡು ಹೋಗಬಹುದು. ಪಾಸ್ಪೋರ್ಟೇ ಬಿಟ್ಟು ಹೋದ್ರೆ!! ಸಧ್ಯ ತನಿಕೋಡು ಹತ್ರದಲ್ಲಿ ಫಾರೆಸ್ಟ್ ಚೆಕ್ಪೋಸ್ಟ್ ಇರೋದ್ರಿಂದ ಅಲ್ಲೊಂದು ನೆಟ್ವರ್ಕ್ ಟವರ್ ಹಾಕಿದ್ದಾರೆ. ನಮ್ ಕಾಲ್ ಕನೆಕ್ಟ್ ಆಯ್ತು. ಇಲ್ಲಾಂದ್ರೆ ಕೆರೆಕಟ್ಟೆಯೋ ಇಲ್ಲಾಂದ್ರೆ ಮಾಳವೋ ತಲುಪಿದ ಮೇಲೆ ತಂಗಿ ನನಗೆ ಕಾಲ್ ಮಾಡಬೇಕಿತ್ತು. ಅಲ್ಲಿಂದಾ ವಾಪಾಸ್ ಬಂದು ನಾನು ಪಾಸ್ಪೋರ್ಟ್ ತಗಂಡು ಮತ್ತೆ ಹೋಗಿ ಫ್ಲೈಟ್ ಹತ್ತಬೇಕಾಗಿತ್ತು. ಅವಸ್ಥೆಯಲ್ಲಾ!! ನಮ್ಮಪ್ಪ ಒಂದ್ಸಲ ನನ್ಕಡೆ ನೋಡಿ “ಅಲ್ಲಾ ಮಾರೇನೇ….ಪಾಸ್ಪೋರ್ಟೇ ಮರೆತು ಹೊರಟಿದ್ಯಲ್ಲ. ಎಂತಾ ಕತೆ ನಿಂದು!? ಮತ್ತೆಂತಾ ದೇಶ-ಜಗತ್ತು ತಿರುಗಿರದು ನೀನು. ಅದಿಲ್ದೆ ಫ್ಲೈಟು ಹತ್ತಕ್ಕಾಗುತ್ತೆನಾ? ಚೆಕ್ ಮಾಡ್ಕಂಡು ಹೊರಡದಲಾ! ಎಲ್ಲೆಲ್ಲಿ ಎಂತೆಂತಾ ಬಿಟ್ಬಂದಿಯಾ ಎಂತದಾ!! ಯಾರಾದ್ರೂ ಈ ಕಥೆ ಕೇಳಿರೆ ಮುಕ್ಳೀಲಿಬಾಯಲ್ಲಿ ನಗಾಡಲ್ಲಾನಾ ಮಾರೇನೇ! ಆಚೆಸಲ ಬಂದಾಗ ಟವಲ್ ಬಿಟ್ ಹೋಗಿದ್ದಿ, ಹೋದ್ಸಲ ಬಂದಾಗ ಬ್ರಷ್ ಬಿಟ್ ಹೋಗಿಯ, ಈ ಸಲ ಪಾಸ್ಪೋರ್ಟ್. ಮುಂದಿನ ಸಲ ಇನ್ನೆಂತದಾ!” ಅಂತಾ ಫುಲ್ ಕೊಯ್ ಅಂದ್ರು. ಅವತ್ತಿಂದಾ ಇವತ್ತಿನವರೆಗೂ ಅಪ್ಪ ನನ್ನ “ಮರೆಯೋ ವಿಚಾರದಲ್ಲಿ” ಕಾಲೆಳೆಯೋದನ್ನ ಮರೆಯಲ್ಲ.
 
ಮರೆಯೋದು ಮನುಷ್ಯನ ಸ್ವಾಭಾವಿಕ ಗುಣಗಳಲ್ಲೊಂದು. “ಅಯ್ಯೋ ಮರೆತೋಗಿ ಬಿಟ್ರೆ!” ಅಂತಾ ನಾವು ಅದನ್ನ ನೆನಪಿಟ್ಟುಕೊಳ್ಳೋಕೆ ಮಾಡುವ ಹರಸಾಹಸಗಳು ಒಂದೆರಡಲ್ಲ. ಫೋನಲ್ಲಿ ಮೂರುಮೂರುತರಹದ ರಿಮೈಂಡರ್ ಆಪ್’ಗಳು, “ನನಗೆ ನೆನಪಿಸೇ” ಅಂತಾ ಹೆಂಡತಿಗೆ ಹೇಳೋದು (ಆಮೇಲೆ ಅವಳು ಮರೆತರೆ, ಅವಳಿಗೆ ಚೂಟಬಹುದಲ್ಲಾ 😉 ಅದಕ್ಕೆ), ಪೇಪರಲ್ಲಿ ಬರೆದಿಟ್ಕೊಳ್ಳೋದು ಹೀಗೇ ನಾನಾ ರೀತಿಯಲ್ಲಿ ಪ್ರಯತ್ನಿಸ್ತೀವಿ. ಆದರೆ ಒಂದ್ಸಲ ಯೋಚಿಸಿ, ಎಲ್ಲಾದ್ರೂ ಒಂದಿನ ಈ ಭೂಮಿಯಲ್ಲೇನಾದ್ರೂ ಹೆಚ್ಚುಕಮ್ಮಿಯಾಗಿ ಇಡೀ ಮನುಷ್ಯಕುಲವೇ 98% ನಾಶವಾಗಿ ಹೋದ್ರೆ!? ಹೆಂಗೆ ಮತ್ತೆ ವಾಪಾಸ್ ಭೂಮಿಯನ್ನ ಸರಿಮಾಡೋದು, ಹೆಂಗೆ ಹೊಸಾರೀತಿಯಲ್ಲಿ ನಾಗರೀಕತೆಯನ್ನು ಸೃಷ್ಟಿಸೋದು? ಅದೆಲ್ಲಾದ್ರೂ ಮರೆತೋಗಿ ಬಿಟ್ರೆ!!
 
ಅದಕ್ಕೇ, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಜಾರ್ಜಿಯಾ ರಾಜ್ಯದ ಎಲ್ಬರ್ಟ್ ಕೌಂಟಿಯಲ್ಲಿ ಈ ರೀತಿಯೇನಾದ್ರೂ ಮನುಷ್ಯ ಸಂಕುಲವೇ ಅಳಿವಿನಂಚಿಗೆ ತಲುಪಿದ್ರೆ, ಮಾನವೀಯ ಮೌಲ್ಯಗಳನ್ನು ಮರೆಯದೇ, ನಾಗರೀಕತೆಯನ್ನು ಮರುಸೃಷ್ಟಿಸಲು ಸಹಾಯವಾಗುವಂಗೆ ಒಂದು ಹತ್ತು ರೂಲುಗಳನ್ನ ಯಾರೋ ಮಹಾನುಭಾವರು ಬರೆದಿಟ್ಟಿದ್ದಾರಂತೆ. ಅದೂ ಪೇಪರಲ್ಲಿ ಅಳಿಸಿಟ್ಟು ಅದನ್ನೆಲ್ಲಾದ್ರೂ ಯಾರಾದ್ರೂ ಪ್ಯಾಂಟ್ ಜೇಬಲ್ಲಿ ಮರೆತಿಟ್ಟು ವಾಷಿಂಗ್ ಮಷೀನಿಗೆ ಹಾಕಿಬಿಟ್ರೆ! ನಾವೆಷ್ಟು ಸಲ ಹಾಗೆ ಮಾಡಿಲ್ಲ 😉 ಅದಕ್ಕೇ ಹಂಗೆಲ್ಲಾ ಕಳೆದೋಗದಂತೆ ಈ ರೂಲುಗಳನ್ನ ದೊಡ್ಡ ಕಲ್ಲುಗಳಲ್ಲಿ, ಅದೂ ಸುಮಾರು ಇಪ್ಪತ್ತಡಿ ಎತ್ತರದ ನಾಲ್ಕು ಕಲ್ಲುಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕೆತ್ತಿ, ಬ್ರಿಟನ್ನಿನ ‘ಸ್ಟೋನ್-ಹೆಂಝ್’ ತರಹಾ ನಿಲ್ಲಿಸಿಬಿಟ್ಟಿದ್ದಾರೆ. ಈ ನಾಲ್ಕೂ ಕಲ್ಲುಗಳ ನಡುವೆ ಒಂದು ನೇರವಾದ ಕಲ್ಲು ನೆಟ್ಟು, ಅದರ ಮೇಲೆ ಇನ್ನೊಂದು ಚಪ್ಪಡಿಯಿಟ್ಟು, ಆ ಚಪ್ಪಡಿ ಎಲ್ಲಾ ಕಲ್ಲುಗಳನ್ನೂ ಮೇಲಿನಿಂದ ಹಿಡಿದು ನಿಲ್ಲಿರುವ ರೀತಿಯಲ್ಲಿ ಈ ಇಡೀ ಸ್ಮಾರಕವನ್ನು ನಿರ್ಮಿಸಲಾಗಿದೆ.
 
ನಡುಗಂಬದ ಮೇಲಿರುವ ಚಪ್ಪಡಿಯ (capstoneನ) ನಾಲ್ಕೂ ಬದಿಯಲ್ಲಿ “Let these be guidestones to an age of reason” (ಈ ಸೂಚಿಗಳು, ಮುಂದಿನ ತರ್ಕಬದ್ಧ ಯುಗಕ್ಕೆ ಮಾರ್ಗದರ್ಶಿಯಾಗಿರಲಿ) ಅಂತಾ ಈಜಿಪ್ಷಿಯನ್ ಹೈರೋಗ್ಲಿಫಿಕ್ಸ್ (ಚಿತ್ರಲಿಪಿ), ಶಾಸ್ತ್ರೀಯ(classical) ಗ್ರೀಕ್, ಸಂಸ್ಕೃತ ಹಾಗೂ ಬ್ಯಾಬಿಲೋನಿಯನ್ ಕ್ಯೂನಿಫಾರ್ಮ್ ಭಾಷೆಗಳಲ್ಲಿ ಬರೆಯಲಾಗಿದೆ. ಚಿತ್ರ – ೧ ಇಡೀ ಸ್ಮಾರಕದ ರಚನೆಯನ್ನು ಚೆನ್ನಾಗಿ ವಿವರಿಸುತ್ತದೆ.
ff_guidestones3_f
 
ಮಾನವೀಯತೆ ಮತ್ತು ಮನುಕುಲದ ಭವಿಷ್ಯದ ಬಗ್ಗೆ ಮಾತನಾಡುವ ಈ ಕಲ್ಲಿನ ಸ್ಮಾರಕವನ್ನು “ಜಾರ್ಜಿಯಾದ ಮಾರ್ಗಸೂಚಿಗಳು” (Georgia Guidelines) ಎಂದೇ ಕರೆಯಲಾಗುತ್ತದೆ. ಈ 10 ಮಾರ್ಗಸೂಚಿಗಳು, ಮುಂದೆಂದಾದರೂ ನಮಗೆ ಇಡೀ ಮನುಕುಲವನ್ನು ಮತ್ತೀ ಪ್ರಪಂಚವನ್ನು ಮೊದಲಿನಿಂದಾ ಕಟ್ಟಲು ಅವಕಾಶ ಸಿಕ್ಕರೆ ಹೇಗೆ ಕಟ್ಟಬಹುದು ಮತ್ತು ಹೇಗೆ ಕಟ್ಟಬೇಕು ಅನ್ನುವುದರ ಬಗ್ಗೆ ವಿವರಿಸುತ್ತವೆ.
 
ಈ ನಾಲ್ಕೂಕಲ್ಲುಗಳ ಎರಡೂ ಬದಿಯಲ್ಲಿ, ಅಂದರೆ ಒಟ್ಟು ಎಂಟುಕಡೆಗಳಲ್ಲಿ, ಇಂದಿನ ಆಧುನಿಕ ಜಗತ್ತಿನ ಎಂಟು ಬೇರೆ ಬೇರೆ ಪ್ರಸಿದ್ಧ ಭಾಷೆಗಳಲ್ಲಿ ಈ ಹತ್ತೂ ನಿಯಮಾವಳಿಗಳನ್ನು ಕೆತ್ತಲಾಗಿದೆ. ಆ ಎಂಟು ಭಾಷೆಗಳು ಇಂಗ್ಳೀಷ್, ಸ್ಪಾನಿಷ್, ಸ್ವಾಹಿಲಿ, ಹಿಂದಿ, ಹೀಬ್ರೂ, ಅರಾಬಿಕ್, ಸಾಂಪ್ರದಾಯಿಕ ಚೈನೀಸ್ ಮತ್ತು ರಷ್ಯನ್. “ಏನೀ ಹತ್ತು ಮಾರ್ಗಸೂಚಿಗಳು ಮತ್ತು ಅವೇನನ್ನು ಹೇಳುತ್ತವೆ?” ಎಂಬ ಕುತುಹಲ ನಿಮಗಿದ್ದರೆ ಮುಂದೆ ಓದಿ:
 
ಸೂಚಿ 1) ಇಡೀ ಭೂಮಿಯ ಜನಸಂಖ್ಯೆ 5 ಬಿಲಿಯನ್ ದಾಟದಂತೆ ನೋಡಿಕೊಳ್ಳುತ್ತಾ, ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಿ
ಸೂಚಿ 2) ಸಂತಾನೋತ್ಪತ್ತಿಯನ್ನು ವಿವೇಕದಿಂದ ಮುಂದುವರೆಸಿ – ವೈವಿಧ್ಯತೆ ಮತ್ತು ಆರೋಗ್ಯಕರ ಜನಾಂಗದ ಸೃಷ್ಟಿಯೆಡೆಗೆ ನಿಮ್ಮ ಗಮನವಿರಲಿ
ಸೂಚಿ 3) ಇಡೀ ಮಾನವಕುಲವನ್ನು ಒಂದೇ ಭಾಷೆಯಿಂದ ಒಗ್ಗೂಡಿಸಿ
ಸೂಚಿ 4) ಮಾನವ ಸಹಜ ಉತ್ಸಾಹ – ನಂಬಿಕೆ – ಸಂಪ್ರದಾಯಗಳೊಂದಿಗೆ ಕೂಡಿದ ತರ್ಕಸಹಿತ ಕಾರಣಗಳೊಂದಿಗೆ ನಿಮ್ಮ ಆಡಳಿತ ಮುಂದುವರೆಯಲಿ
ಸೂಚಿ 5) ದೇಶ ಮತ್ತು ನಾಗರೀಕರನ್ನು ನ್ಯಾಯೋಚಿತ ಕಾನೂನುಗಳು ಮತ್ತು ನಿಷ್ಪಕ್ಷಪಾತವಾದ ನ್ಯಾಯಾಲಯಗಳ ಮೂಲಕ ರಕ್ಷಿಸಿ
ಸೂಚಿ 6) ಆಯಾ ದೇಶಗಳ ಆಡಳಿತ ಸಂಪೂರ್ಣವಾಗಿ ಅವುಗಳ ಆಂತರಿಕ ವಿಷಯವಾಗಿರಲಿ, ಬಾಹ್ಯ (ಅಂತರಾಷ್ಟ್ರೀಯ) ವಿವಾದಗಳನ್ನು ಅಂತರಾಷ್ಟ್ರೀಯ ನಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ
ಸೂಚಿ 7) ಸಣ್ಣ-ಪುಟ್ಟ ವಿಷಯಗಳಿಗೂ ಚಿಲ್ಲರೆ ಕಾನೂನುಗಳನ್ನು ರೂಪಿಸುವುದನ್ನು ಬಿಡಿ. ಆಡಳಿತದಲ್ಲಿ ಅನುಪಯುಕ್ತ ಅಧಿಕಾರಿಗಳು ಅಥವಾ ಸ್ಥಾನಮಾನಗಳನ್ನು ಸೃಷ್ಟಿಸದಿರಿ
ಸೂಚಿ 8) ಎಲ್ಲಾ ನಾಗರೀಕರಿಗೂ ವೈಯಕ್ತಿಕ ಹಕ್ಕುಗಳನ್ನು ಮಾತ್ರವಲ್ಲ ಕೆಲ ಸಾಮಾಜಿಕ ಕರ್ತವ್ಯಗಳನ್ನೂ ರೂಪಿಸಿ. ಈ ಹಕ್ಕು-ಕರ್ತವ್ಯಗಳು ಸಮತೋಲನದಲ್ಲಿರಲಿ.
ಸೂಚಿ 9) ಸತ್ಯ – ಸೌಂದರ್ಯ – ಪ್ರೀತಿ – ಹಾಗೂ ಅನಂತದೊಂದಿಗೆ ಸಾಮರಸ್ಯವನ್ನು ಬಯಸುವ ಮನೋಭಾವಗಳನ್ನು ಪ್ರೋತ್ಸಾಹಗೊಳಿಸಿ
ಸೂಚಿ 10) ಈ ಭೂಮಿಯ ಮೇಲೆ ಕ್ಯಾನ್ಸರ್ ಆಗಬೇಡಿ. ಪ್ರಕೃತಿಗೆ ಜಾಗವನ್ನು ಬಿಡಿ (ಇನ್ನೊಮ್ಮೆ ಕೇಳಿಸಿಕೊಳ್ಳಿ) ಪ್ರಕೃತಿಗೆ ಜಾಗವನ್ನು ಬಿಡಿ
 
ಚಂದ ಉಂಟಲ್ಲಾ ನಿಯಮಾವಳಿಗಳು? ನಮ್ಮ ಇಂದಿನ ಜಗತ್ತಿನ ಸ್ವಲ್ಪಮಂಕಾದ ಪರಿಸ್ಥಿತಿ, ಮತ್ತದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳನ್ನು ಅವಲೋಕಿಸಿದಾಗ ಹೊಸಾ ಭೂಮಿ ಹೀಗೇ ಇದ್ದರೆ ಚಂದ ಅನಿಸುತ್ತದೆ ಅಲ್ಲವೇ.
 
ಅಂದಹಾಗೆ ಇದ್ದು ಬರೀ ಹತ್ತು ಸೂಚನೆಗಳನ್ನು ಬರೆದ ಸ್ಮಾರಕವಷ್ಟೇ ಅಲ್ಲ. ಇಡೀ ಸ್ಮಾರಕ ಒಂದು ಗಡಿಯಾರ, ಕ್ಯಾಲೆಂಡರ್ ಮತ್ತು ದಿಕ್ಸೂಚಿಯಾಗಿಯೂ ಕೆಲಸ ಮಾಡುತ್ತದೆ! ಹೇಗೆ ಅಂತಿರಾ?
 
(*) ಕ್ಯಾಲೆಂಡರ್ – ಇದನ್ನು ಎಲ್ಬರ್ಟ್ ಕೌಂಟಿಯ ಅತ್ಯಂತಎತ್ತರದ ಜಾಗದಲ್ಲಿ ಕಟ್ಟಿದ್ದಾರೆ. ಇಲ್ಲಿಂದ ಸೂರ್ಯನ ಪಶ್ಚಿಮ- ಪೂರ್ವ-ಪಶ್ಚಿಮ ವಾರ್ಷಿಕಚಲನವನ್ನು ಗಮನಿಸಬಹುದಾಗಿದೆ (ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿರೋ ಕೊಸರಿನಲ್ಲಿ). ಈ ಜಾರ್ಜಿಯಾದ ಮಾರ್ಗಸೂಚಿ ಸ್ಮಾರಕದ ಮಧ್ಯಕಂಬದಲ್ಲಿ ಸುಮಾರಿ ಐದಡಿ ಎತ್ತರದಲ್ಲಿ ಆಯತಾಕಾರದಲ್ಲಿ ಕೊರೆದಿರುವ ಜಾಗದ ಮೂಲಕ ನೀವು ಸೂರ್ಯ ಹುಟ್ಟುವ ಜಾಗವನ್ನು ನೋಡಿ ನೀವು ವರ್ಷದ ದಿನಗಳನ್ನು ಅಂದಾಜು ಹಾಕಬಹುದು. ಆಯತ ಸಂಕ್ರಾಂತಿ ಮತ್ತು ವಿಷುವತ್ ಸಂಕ್ರಾಂತಿಯ ದಿನಗಳಂದು ಈ ಕೊರೆತದ ನಟ್ಟ ನಡುಮಧ್ಯದಲ್ಲಿ ಸೂರ್ಯೋದಯವಾಗುತ್ತದೆ. ಇದನ್ನು ಚಿತ್ರ – ೨ ಮತ್ತು ಚಿತ್ರ – ೧ರಲ್ಲಿ 2 ಎಂಬ ಅಂಕಿಯಿರುವಲ್ಲಿ ತೋರಿಸಲಾಗಿದೆ.
Depositphotos_25902953_xl-2015-1600x1631
 
(*) ದಿಕ್ಸೂಚಿ – ಇದೇ ನಡುಗಂಬದಲ್ಲಿ ಸ್ವಲ್ಪ ಎತ್ತರದಲ್ಲಿ ಇನ್ನೊಂದು ರಂಧ್ರವನ್ನು ಕೊರೆದಿದ್ದಾರೆ. ಆ ರಂಧ್ರದ ಕೋನ ಹೇಗಿದೆಯೆಂದರೆ, ಅದರಮೂಲಕ ನೋಡಿದಾಗ ಧ್ರುವನಕ್ಷತ್ರ ನಿಮ್ಮ ಕಣ್ಣೆದುರಿಗೇ ಇರುತ್ತದೆ. ಇದರಿಂದ ನೀವು ದಿಕ್ಕುಗಳನ್ನು ಸರಿಯಾಗಿ ಗುರುತಿಸಿಕೊಳ್ಳಬಹುದು (ಚಿತ್ರ – ೧ರಲ್ಲಿ 3 ಎಂಬ ಅಂಕಿಯಿರುವಲ್ಲಿ).
 
(*) ಗಡಿಯಾರ – ಈ ನಡುಗಂಬದ ಮೇಲಿರುವ capstoneನಲ್ಲಿ(ಅಂದರೆ ನಾಲ್ಕೂ ಕಲ್ಲುಗಳನ್ನು ಹಿಡಿದಿಟ್ಟಿರುವ ಚಪ್ಪಡಿಯಲ್ಲಿ) ಕೊರೆದಿರುವ ಇನ್ನೊಂದು ರಂಧ್ರದ ಮೂಲಕ ಮಧ್ಯಾಹ್ನದ ಸೂರ್ಯ ಅಂದರೆ ನಡುಮಧ್ಯಾಹ್ನದ ಹನ್ನೆರಡು ಘಂಟೆಯ ಸೂರ್ಯ ಬೆಳಸಿನ ಸರಳೊಂದನ್ನು ತೋರಿಸಿ, ನಿಮಗೆ “ಸಮಯ ಈಗ ಹನ್ನೆರಡು ಘಂಟೆ” ಅಂತಾ ಹೇಳಿ ಮುಂದುವರೆಯುತ್ತಾನೆ (ಚಿತ್ರ – ೧ರಲ್ಲಿ 4 ಎಂಬ ಅಂಕಿಯಿರುವಲ್ಲಿ).
 
ಈ ಸ್ಮಾರಕದಿಂದ ಸ್ವಲ್ಪದೂರದಲ್ಲಿ ಇನ್ನೊಂದು ಕಲ್ಲನ್ನು ನೆಲಕ್ಕೆ ಹಾಸಿ, ಅದರಲ್ಲಿ ಈ ಸ್ಮಾರಕದ ರೂಪುರೇಷೆಗಳನ್ನೂ, ಅದು ಹೇಗೆ ಕೆಲಸ ಮಾಡುತ್ತದೆ ವಿವರಿಸಲಾಗಿದೆ. ಜೊತೆಗೇ “ಈ ಕಲ್ಲಿನ ಅಡಿಯಲ್ಲಿ ಆರಡಿ ಆಳದಲ್ಲಿ ಒಂದು ಟೈಂ ಕ್ಯಾಪ್ಸೂಲನ್ನು ______ ದಿನಾಂಕದಂದು ನೆಡಲಾಗಿದೆ. ಅದನ್ನು _______ ದಿನದಂದು ತೆರೆಯಬೇಕು” ಅಂತಲೂ ಬರೆಯಲಾಗಿದೆ. ಆದರೆ ದಿನಾಂಕಗಳಿರಬೇಕಾದ ಜಾಗಗಳೆರಡೂ ಖಾಲಿಯಿರುವುದರಿಂದ, ಇನ್ನೂ ಯಾವುದೇ ಟೈಂ ಕ್ಯಾಪ್ಸೂಲನ್ನು ಇಡಲಾಗಿಲ್ಲ ಎಂದು ತಿಳಿಯಲಾಗಿದೆ. ಒಂತರಾ ವಿಚಿತ್ರವಾಗಿದೆಯಲ್ಲಾ!?
 
ಭೂಕಂಪ, ಅಣುಬಾಂಬ್ ಸ್ಪೋಟದಂತಹಾ ಮಹಾಮಾರಿಗಳನ್ನೂ ತಡೆಯುವಷ್ಟು ಬಲಿಷ್ಟವಾದ ಈ ಸ್ಮಾರಕನ್ನು ಯಾರು ಕಟ್ಟಿಸಿದ್ದು, ಯಾವ ಕಾರಣಕ್ಕೆ ಕಟ್ಟಿಸಿದ್ದು ಎಂಬ ವಿಷಯವಿನ್ನೂ ಸಾರ್ವಜನಿಕವಾಗಿಲ್ಲ. ಖಾಸಗೀ ಸ್ವತ್ತಿನ ಜಾಗದಲ್ಲಿ ಕಟ್ಟಿರುವ ಇದನ್ನು ಸಧ್ಯಕ್ಕೆ ಎಲ್ಬರ್ಟ್ ಕೌಂಟಿಯ ಮುನಿಸಿಪಾಲಿಟಿ ನೋಡಿಕೊಳ್ಳುತ್ತಿದೆ. ಇದನ್ನು ನೋಡಲು ಯಾವುದೇ ಶುಲ್ಕವಿಲ್ಲ. ಆದರೆ ಇದನ್ನು ತಲುಪುದೇ ದೊಡ್ಡತಲೆಬ್ಯಾನೆ. ದುರ್ಗಮ ದಾರಿ ಅಂತಲ್ಲ, ಇಲ್ಲಿಗೆ ತಲುಪುವ ರಸ್ತೆಗಳೆಲ್ಲಾ ಚೆನ್ನಾಗಿಯೇ ಇವೆ. ಆದರೆ ಇದಕ್ಕೆ ಅತೀ ಹತ್ತಿರವಿರುವ ಮುಖ್ಯ ಹೆದ್ದಾರಿಯೇ 25ಮೈಲಿ ದೂರದಲ್ಲಿದೆ. ಜಾರ್ಜಿಯಾದ ರಾಜಧಾನಿ ಅಟ್ಲಾಂಟಕ್ಕೂ ಇಲ್ಲಿಗೂ 125ಮೈಲಿ ದೂರ! ಯಾರ ಕಣ್ಣಿಗೂ ದೊಡ್ಡದಾಗಿ ಕಾಣದ, ಯಾವ ಗಿನ್ನಿಸ್ ರೆಕಾರ್ಡಿನ ಹಂಗೀಗೂ ಬೀಳದ, “ಹಳ್ಳಿಗಳಲ್ಲೂ ಹಳ್ಳಿ”ಯಂತಹಾ ಜಾಗದಲ್ಲಿ ಕಟ್ಟಿರುವ ಈ ಸ್ಮಾರಕದ ಪ್ರಾರಂಭವೂ ಒಂದು ಕುತೂಹಲಕಾರೀ ಕಥೆ. ಬರೀ ಇತಿಹಾಸವಲ್ಲದೇ, ಇದರ ವರ್ತಮಾನವೂ ಸಹ ಸ್ವಲ್ಪ ಕಾಂಟ್ರವರ್ಸಿಯೇ. ಇಷ್ಟೊಳ್ಳೇ ಸಂದೇಶವಿರುವ ಈ ಸ್ಮಾರಕದ ವಿಚಾರದಲ್ಲೂ ಕಾಂಟ್ರವರ್ಸಿಯೇ? ಎಂತಾ ಅದು ಅಂತೆಲ್ಲಾ ಅದನ್ನೂ ಇಲ್ಲೇ ಬರೆದರೆ, ನೀವು ಓದಿ ಹೈರಾಣಾಗುವ ಸಾಧ್ಯತೆಯಿರುವುದರಿಂದ, ಅವನ್ನು ಬೇರೆಯದೇ ಲೇಖನದಲ್ಲಿ ಬರೆದು ಪ್ರಕಟಿಸುತ್ತೇನೆ.
 
 
ಕೊಸರು: ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಹುಟ್ಟುವುದಿಲ್ಲ. ಮಕರಸಂಕ್ರಮಣದ ನಂತರ ದಿನದಿಂದ ದಿನಕ್ಕೆ ಸೂರ್ಯಹುಟ್ಟುವ ಜಾಗ ಸ್ವಲ್ಪಸ್ವಲ್ಪವೇ ಎಡಕ್ಕೆ (ಅಂದರೆ ಈಶಾನ್ಯದೆಡೆಗೆ) ಜರುಗುತ್ತದೆ. ನಿಧಾನಕ್ಕೆ ಈ ಚಲನೆ ತನ್ನ ಉತ್ತುಂಗಕ್ಕೆ ತಲುಪಿ, ಮತ್ತೆ ನಂತರ ಕರ್ಕಾಟಕ ಸಂಕ್ರಮಣದ ದಿನ ಈ ಚಲನೆ ಪೂರ್ವದಿಂದ ಬಲಕ್ಕೆ (ಆಗ್ನೇಯಕ್ಕೆ) ಜರುಗಲಾರಂಭಿಸುತ್ತದೆ. ಇದು ಮಾತ್ರವಲ್ಲದೇ, ವರ್ಷವಿಡೀ ಸೂರ್ಯನ ಚಲನೆ ಒಂದೇ ಸಮನಾಗಿರುವುದಿಲ್ಲ. ಅಂದರೆ ಹೇಗೆ ಸೂರ್ಯ ದಿನವೂ ಒಂದೇ ಸಮಯಕ್ಕೆ ಹುಟ್ಟುವುದಿಲ್ಲವೋ, ಹಾಗೆಯೇ ದಿನದ ಒಂದು ನಿಯಮಿತ ಸಮಯದಲ್ಲಿ ಸೂರ್ಯ ವರ್ಷವಿಡೀ ಒಂದೇ ಜಾಗದಲ್ಲಿ ಇರುವುದಿಲ್ಲ. ನೀವು ಒಂದು ಕ್ಯಾಮರಾವನ್ನು ಒಂದೇ ಜಾಗದಲ್ಲಿ ನಿಲ್ಲಿಸಿಟ್ಟು, ದಿನದ ಒಂದು ನಿರ್ದಿಷ್ಟ ಸಮಯದಲ್ಲಿ (ಉದಾ: ಪ್ರತಿದಿನವೂ 10:30ಕ್ಕೆ) ದಿಗಂತವೂ ಫ್ರೇಮಿನಲ್ಲಿರುವಂತೆ ಸೂರ್ಯನದೊಂದು ಫೋಟೋ ತೆಗೆದು, 365 ಫೋಟೋಗಳ ಓವರ್-ಲ್ಯಾಪ್ ಮಾಡಿದರೆ, ಸೂರ್ಯ ಆಕಾಶದಲ್ಲಿ, ಚಿತ್ರ – ೩ರಲ್ಲಿದ್ದಂತೆ ಅಂಕೆ 8ರ ಆಕಾರದಲ್ಲಿ ಗೋಚರವಾಗುವುದನ್ನು ಕಾಣಬಹುದು. ಈ ವಿದ್ಯಮಾನಕ್ಕೆ “ಅನಲೆಮ್ಮಾ” (Analemma) ಎನ್ನುತ್ತಾರೆ. ಈ ‘ಅನಲೆಮ್ಮಾ’ ಭೂಮಿ ಗುಂಡಗಿರುವುದಕ್ಕೂ, ತನ್ನ ಅಕ್ಷದ ಮೇಲೆ 23.43 ಡಿಗ್ರೀ ವಾಲಿರುವುದಕ್ಕೂ ಪರೋಕ್ಷ ಸಾಕ್ಷಿ.
Analemma_Web

“ಅತಿಥಿ ದೇವೋಭವ ಅನ್ನುವ ನಾವು ಒಳ್ಳೆಯ ಅತಿಥಿಗಳಾಗೋಕೆ ಯಾಕೆ ಕಲಿತಿಲ್ಲ!?”

ಮೊನ್ನೆ ಬಾಲಿಯ ಹೋಟೆಲೊಂದರಲ್ಲಿ ತಂಗಿದ್ದ ಕುಟುಂಬವೊಂದು ಅಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚಿದ್ದಕ್ಕೆ, ಹೋಟೆಲಿನವರು ಹಿಡಿದು ಅವರ ಮರ್ಯಾದೆ ಮೂರುಕಾಸಿಗೆ ಹರಾಜಿಹಾಕಿದ್ದಕ್ಕೆ ಬೇಸರ ಮಾಡಿಕೊಂಡವರು ಬಹಳ ಜನರಿದ್ದಾರೆ. “ಮಾಡಿದ್ದು ತಪ್ಪಾಯ್ತು. ಅದಕ್ಕೆ ತಕ್ಕ ಮಾಡಿದ್ದಕ್ಕೆ ಹಣ ಕೊಡ್ತೀವಿ” ಅಂತಾ ಅವರು ಹೇಳಿದಮೇಲೂ ಅಷ್ಟೆಲ್ಲ ಹ್ಯುಮಿಲಿಯೇಟ್ ಮಾಡುವ ಅಗತ್ಯವೇನಿತ್ತು!” ಅಂತಾ ಕೇಳಿದವರನ್ನು ನೋಡಿದ್ದೇವೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ಬೇಸರ ಮಾಡಿಕೊಳ್ಳುವ ಮಾತೇ ಇಲ್ಲ. ಹೋಟೆಲಿನವ ಮಾಡಿದ್ದು ನೂರಕ್ಕೆ ನೂರು ಸರಿ. ಆ ವಿಡಿಯೋದಲ್ಲಿ, ಹೋಟೆಲಿನವ ಆ ಮಟ್ಟಕ್ಕೆ ಇಳಿದು ಅವರನ್ನು ನಡುರಸ್ತೆಯಲ್ಲಿ ಮರ್ಯಾದೆ ತೆಗೆದದ್ದಕ್ಕೆ ಆ ಕುಟುಂಬ ಕದ್ದದ್ದು ಮಾತ್ರವಲ್ಲ, ಅವರ ಒರಟು ವರ್ತನೆ ಇನ್ನೂ ಮುಖ್ಯ ಕಾರಣ. ಅದರಲ್ಲಿ ನೋಡಬಹುದು, ಹೋಟೆಲಿನವ ಮತ್ತೆ ಮತ್ತೆ ಹೇಳುತ್ತಾನೆ “ಈಗ ಎಲ್ಲಿದೆ ನಿಮ್ಮ ಒರಟು ಧ್ವನಿಯ ಮಾತುಗಳು? ಆಡಿ ತೋರಿಸಿ ನೋಡುವಾ!” ಅಂತಾ. ಕಳ್ಳತನ ಮಾಡಿ, ಆಮೇಲೆ ಅದನ್ನು ಪ್ರಶ್ನಿಸಿದವರೆಡೆಗೆ ಧ್ವನಿಯೇರಿಸಿ ಮಾತನಾಡಿದರೆ ಯಾರಿಗಾದರೂ ಸಿಟ್ಟುಬರೋದು ಸಹಜವೇ.

RPG Enterprisesನ ಮಾಲೀಕ ಹರ್ಷ್ ಗೊಯೆಂಕಾ ಕೂಡಾ ಮೊನ್ನೆ ಒಂದು ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಸ್ವಿಟ್ಝರ್ಲ್ಯಾಂಡಿನ ಹೋಟೆಲೊಂದರಲ್ಲಿ ಅವರು ಚೆಕ್-ಇನ್ ಆದಾಗ “ಯೂ ಆರ್ ಫ್ರಂ ಇಂಡಿಯಾ? ಇಲ್ಲೊಂದಷ್ಟೂ ನಿಯಮಾವಳಿಗಳಿವೆ ಓದಿ” ಅಂತಾ ಪೇಜು ಕೊಟ್ಟರಂತೆ. ಅದೇನೂ ಎಲ್ಲಾ ಪ್ರವಾಸಿಗಲಿಗೆ ಇದ್ದ ನಿಯಮಗಳಲ್ಲ. ಭಾರತೀಯರಿಗೆ ಮಾತ್ರವೇ ಇದ್ದದ್ದು!!! (ಚಿತ್ರ ಕೆಳಗಿದೆ ನೋಡಿ). ಆ ನಿಯಮಾವಳಿಗಳ ಪ್ರಕಾರ ಭಾರತೀಯರು ಸಾಮಾನ್ಯವಾಗಿ ಕಾರಿಡಾರಿನಲ್ಲಿ ದೊಡ್ಡದಾಗಿ ಮಾತನಾಡುವವರು, ರೆಸ್ಟುರಾದಲ್ಲಿ ಬಫೆ ಬ್ರೇಕ್ಫಾಸ್ಟಿನಲ್ಲಿ ತಿಂಡಿಯನ್ನು ತಮ್ಮ ತಟ್ಟೆಗೆ ಹಾಕಿಕೊಳ್ಳುವಾಗ ಚಮಚ/ಸ್ಪಾಚುಲಾ ಬಳಸದೇ ತಮ್ಮ ಕೈಯನ್ನು ಬಳಸಿ ಹಾಕಿಕೊಳ್ಳುವವರು, ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನದ ಊಟಕ್ಕಿರಲಿ ಅಂತಾ ಡಬ್ಬಕ್ಕೆ ತುರುಕಿಕೊಳ್ಳುವವರು, ಚಮಚ ಕದಿಯುವವರು ಅಂತೆಲ್ಲಾ ಭಾವಿಸಿದಂತಿತ್ತು. ಮಿ.ಗೊಯಂಕಾ ಅದರಬಗ್ಗೆ ಪ್ರಶ್ನಿಸಿದಾಗ, “ನೀವು ಅಂತವರು ಅಂತಾ ನಾವು ಹೇಳ್ತಾ ಇಲ್ಲ. ನಮ್ಮಲ್ಲಿ ತಂಗಿದ ಹೆಚ್ಚಿನ ಭಾರತೀಯರ ಪ್ರವಾಸಿಗಳ ಜೊತೆಗಿನ ನಮ್ಮ ಅನುಭವ ಹಾಗಿದೆ. ಆದ್ದರಿಂದ ಮ್ಯಾನೇಜ್ಮೆಂಟ್ ಈ ಪಟ್ಟಿಯನ್ನು ಚೆಕ್-ಇನ್ ಮಾಡುವ ಎಲ್ಲಾ ಭಾರತೀಯರಿಗೂ ಕೊಡು ಅಂದಿದೆ” ಅಂತಾ ರಿಸೆಪ್ಷನಿಸ್ಟು ಅಂದನಂತೆ.

ಇವತ್ತು ಗೆಳೆಯ Rangaswamy Mookanahalli ಕೂಡಾ ಅಂತಹದ್ದೊಂದು ಅನುಭವ ಹಂಚಿಕೊಂಡರು. ನಾನು ಸ್ವತಃ ಭಾರತೀಯನಾಗಿ ಇಂತಹ ವರ್ತನೆಗಳನ್ನು ನೋಡಿದ್ದೇನೆ. ನಾನು ಗ್ರೀಸ್ ಪ್ರವಾಸದಲ್ಲಿದ್ದಾಗ ಅಥೆನ್ಸಿನಿಂದಾ ಸ್ಯಾಂಟೋರಿನಿಗೆ ಹೋಗುವ ಹಡಗಲ್ಲಿ ಭಾರತೀಯರ ಗುಂಪೊಂದು ಇಡೀ ಲೌಂಜ್ ಅನ್ನು ಗಬ್ಬೆಬ್ಬಿಸಿಟ್ಟಿತ್ತು. ತಮ್ಮ ಕುಟುಂಬಕ್ಕೇ ಇಡೀ ಜಾಗ ಬೇಕು ಅನ್ನೋ ಹಪಾಹಪಿಯಲ್ಲಿ, ಉಳಿದವರಿಗೆ ಕೂರಲುಬಿಡದಂತೆ ಸೀಟುಗಳ ಮೇಲೆಲ್ಲಾ ತಮ್ಮ ಲಗೇಜ್ ಇಟ್ಟು, ಕೂರಲು ಬಂದವರಿಗೆ “ಇಲ್ಲಿ ನಮ್ಮವರಿದ್ದಾರೆ” ಅಂತಾ ಹೇಳಿ ಹೇಳಿ ಓಡಿಸುತ್ತಿತ್ತು. ಓಡಿಸಿಯಾದ ಮೇಲೆ “ಭಗಾ ದಿಯಾ ಮೈನೇ ಚೂತ್ಯೇ ಕೋ” ಅನ್ನೋ ನಗು ಬೇರೆ. ಕೊನೆಗೆ ಬ್ರಿಟೀಷನೊಬ್ಬ ಹಡಗಿನ ಸಿಬ್ಬಂದಿಗೆ ಹೇಳಿ ಖಾಲಿ ಮಾಡಿಸಿ “I know you were lying, you Indian” ಅಂತಾ ಬುಸುಗುಟ್ಟಿದ. ಇನ್ನೊಮ್ಮೆ ಇಲ್ಲಿಂದಾ (ದುಬೈಯಿಂದಾ) ಬೆಂಗಳೂರಿಗೆ ಹೋಗುವ ಫ್ಲೈಟಿನಲ್ಲಿ ಒಂದಷ್ಟು ಜನ ಕನ್ನಡದವರೇ ಹುಡುಗರಲ್ಲಿ “ಏಯ್ ಬಾತ್ರೂಮಲ್ಲಿ ಕ್ರೀಮು ಪರ್ಫ್ಯೂಮಿದೆ ಕಣ್ರೋ. ಸರಿಯಾಗಿ ಹಾಕ್ಕೊಂಡು ಬಂದೆ. ನೀವೂ ಹೋಗ್ರೋ” ಅನ್ನುವವ ಒಬ್ಬ. ಇನ್ನೊಬ್ಬ “ನಾನು ಹಾಕ್ಕೊಂಡು ಬರ್ಲಿಲ್ಲ, ಬಾಟ್ಲಿಯನ್ನೇ ತಗಂಡು ಬಂದೆ” ಅಂದ!! ಅಥೆನ್ಸಿನ ಹಡಗಲ್ಲಾದ್ರೆ ಇಲ್ಲಿನ ಭಾಷೆ ಬರದವರು ಇದ್ರು ಅನ್ನಿ. ಇದು ಬೆಂಗಳೂರಿಗೇ ಹೋಗೋ ಫೈಟು. ಸ್ವಾಭಾವಿಕವಾಗಿಯೇ ಸಹಪ್ರಯಾಣಿಕರು ಕನ್ನಡದವರು ಇರ್ತಾರೆ ಅನ್ನೋ ಕನಿಷ್ಟ ಪರಿಜ್ಞಾನವೂ ಇಲ್ಲದೇ ಕನ್ನಡದಲ್ಲೇ ಕೂಗಾಡುತ್ತಿದ್ದವರು!! ಉಳಿದವರು ಹುಬ್ಬೇರಿಸಿ ಮುಖ ಮುಖ ನೋಡಿಕೊಂಡು ಅಸಹನೆಯಲ್ಲಿ ತಲೆಕೊಡವಿಕೊಂಡರು.

ಇದು ಬಾಲಿ, ಸ್ವಿಟ್ಝರ್ಲ್ಯಾಂಡ್, ಪ್ಯಾರಿಸ್ ಮಾತ್ರವಲ್ಲ. ಜಗತ್ತಿನೆಲ್ಲೆಡೆ ಭಾರತೀಯರೆಡೆಗೆ ಈ ತಾತ್ಸಾರ ಭಾವನೆಯಿದೆ. ಎಲ್ಲರೂ ಭಾರತೀಯರು ಹಾಗಲ್ಲ ಅನ್ನೋ ಮಾತು ಖಂಡಿತಾ ಒಪ್ಪುವಂತದ್ದು. ಹೋಟೆಲ್ಲೊಂದರಲ್ಲಿ ಒಬ್ಬ ಭಾರತೀಯನ ಕೆಟ್ಟವರ್ತನೆಯನ್ನು ಹೋಟಿಲ್ಲಿನ ಸಿಬ್ಬಂದಿಯ ಮನಸ್ಸಿನಿಂದ ತೆಗೆಯಲು ಮುಂದಿನ ಹತ್ತು ಭಾರತೀಯರು ಇರುವುದಕ್ಕಿಂತಾ ಒಳ್ಳೆಯವರಾಗಿ ವರ್ತಿಸಬೇಕಾಗುತ್ತದೆ. ಆದರೆ ಹತ್ತು ಭಾರತೀಯರು ಹೋಟೆಲೊಂದರಲ್ಲಿ ಒಳ್ಳೆಯರೀತಿಯಲ್ಲಿ ನೆನಪಿಟ್ಟುಕೊಳ್ಳುವಂತಾ ವರ್ತನೆ ತೋರಿಸುವ ಪ್ರಾಬಬಲಿಟಿ ತೀರಾ ಕಮ್ಮಿ. ಈ ಕಾರಣಕ್ಕೇ ಭಾರತೀಯರೆಂದರೆ ಹೊರದೇಶದ ವರ್ತಕರಿಗೆ ಅದೊಂದು “ಮರೆಯಲಾಗದ ಅನುಭೂತಿ”.

ಇದು ಬರೀ ಯೂರೋಪು ಅಥ್ವಾ ಅಮೇರಿಕಾದಲ್ಲಿ ಮಾತ್ರವಲ್ಲ. ಕತ್ತೆತ್ತಿದರೆ 70% ಭಾರತೀಯರೇ ಕಾಣಸಿಗುವ ದುಬೈಯಲ್ಲೂ ಇದೇ ಕಥೆ. ಸ್ವಲ್ಪ ಸಮಾಧಾನದ ವಿಷಯವೆಂದರೆ ಇಲ್ಲಿ ಭಾರತೀಯರಿಗೆಂದೇ ಟೂರು ಏರ್ಪಾಡು ಮಾಡುವ ಏಜೆನ್ಸಿಗಳಿವೆ. ಅವರು ಊಟಕ್ಕೆ ಉಳಿಯಕ್ಕೆ ಬುಕ್ ಮಾಡುವ ಹೋಟೆಲುಗಳೂ ಭಾರತೀಯರದ್ದೇ ಆಗಿರುತ್ತವೆ, ಅಥವಾ ಭಾರತೀಯರನ್ನು ಮ್ಯಾನೇಜ್ ಮಾಡಲು ತಿಳಿದಿರುವವರದ್ದೇ ಆಗಿರುತ್ತವೆ. ಆ ಹೋಟೆಲಿನವರಿಗೆ ಇವರ ಬುದ್ಧಿ ಗೊತ್ತಿರುವದಕ್ಕೋ ಏನೋ, ಡಬಲ್ ರೂಮಿನಲ್ಲೂ ಎರಡು ಟವಲ್ ಇಡುವುದಿಲ್ಲ, ಒಂದೇ ಇಟ್ಟಿರುತ್ತಾರೆ. ಹೋದರೆ ಬರೀ ಒಂದೇ ಹೋಗಲಿ ಅಂತಲೋ ಅಥವಾ ಬೇಕಾದರೆ ಕಾಲ್ ಮಾಡಿ ಇನ್ನೊಂದು ತರಿಸಿಕೊಳ್ಳಲಿ, ಲೆಕ್ಕವಿರುತ್ತೆ ಎಂಬ ಆಲೋಚನೆಯೋ ಹೋಟೆಲ್ ಮ್ಯಾನೇಜ್ಮೆಂಟಿನವರದ್ದು. ಆದರೆ ಇಲ್ಲಿನ ಮೆಟ್ರೋದಲ್ಲಿ, ರಸ್ತೆಯಲ್ಲಿ ಒಬ್ಬ ಭಾರತೀಯ ಟೂರಿಸ್ಟನ್ನು ಗುರುತಿಸುವುದು ತೀರಾ ಸುಲಭ. ಇಲ್ಲಿನ ಬಹಳಷ್ಟು ಪ್ರವಾಸಿತಾಣಗಳಲ್ಲಿ, ಮೆಟ್ರೋದಲ್ಲಿ ಮಕ್ಕಳ ಎತ್ತರ ನೋಡಿ ಟಿಕೇಟು ಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಅಲ್ಲೆಲ್ಲಾ “ನನ್ನ ಮಗ ಇನ್ನೂ ಯೂಕೇಜಿ. ಸ್ವಲ್ಪ ಉದ್ದ ಇದ್ದಾನೆ ಅಷ್ಟೇ” ಅಂತಾ ಜಗಳ ಮಾಡುವ ಜನ ನಿಮಗೆ ಕಂಡರೆ ಅವರ್ಯಾರು ಅಂತಾ ನಾನು ಹೇಳುವುದೇ ಬೇಡ. ದುಬೈಯ ಸ್ವಚ್ಚತೆಯನ್ನು ಮೆಚ್ಚುತ್ತಲೇ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಬದಿಗೆ ಎಸೆಯುವ, ಊಟಮಾಡಿ ಹೋಟೆಲಿಂದ ಹೊರಗೆಬಂದು ಬಾಯಿಗೆ ನೀರು ಹಾಕಿ ಮುಕ್ಕಳಿಸಿ ಪುಟ್ಫಾತ್ ಮೇಲೆ ಉಗಿಯುವ, ಮೂಗಿನಿಂದ ಸಹಸ್ರಾರದವರೆಗೆ ಸಿಂಬಳ ಏರುವಂತೆ ಎಳೆದು ಥೂ ಅಂತಾ ಉಗಿಯುವ ಪ್ರವಾಸಿಗರೆಲ್ಲಾ ಹೆಚ್ಚಾಗಿ ಒಂದೇ ದೇಶದಿಂದ ಬಂದವರಾಗಿರುತ್ತಾರೆ. ಜೀಬ್ರಾಕ್ರಾಸಿಂಗ್ ಅಲ್ಲೇ ಐವತ್ತು ಮೀಟರ್ ದೂರದಲ್ಲಿದ್ದರೂ, ಇಲ್ಲೇ ರಸ್ತೆಯ ಮೇಲೆ ಓಡುವವರೂ ಎಲ್ಲಿಯವರು ಅಂತೇನೂ ಸ್ಪೆಷಲ್ಲಾಗಿ ಹೇಳಬೇಕಿಲ್ಲ.

ನಮಗೆ ನಮ್ಮ ಜನಸಂಖ್ಯೆಯ ಕಾರಣದಿಂದಾಗಿ personal space ಅನ್ನೋ ಪರಿಕಲ್ಪನೆಯೇ ಇಲ್ಲ. ಭಾರತದಲ್ಲಿದ್ದಾಗ 8 ಜನ ನಿಲ್ಲಬಹುದಾದ ಲಿಫ್ಟಿನಲ್ಲಿ ಮೈಗೆ ಮೈಯಂಟಿಸಿಕೊಂಡು 10 ಜನ ನಿಂತೇ ಆಫೀಸಿಗೆ ಹೋಗುವ ನಾವು, ಬೇರೆ ದೇಶಕ್ಕೆ ಹೋದಾಗಲೂ ಲಿಫ್ಟಿನಲ್ಲಿ ಬೇರೆ ಯಾರಿದ್ದಾರೆ ಅನ್ನೋದನ್ನೂ ನೋಡದೇ ಎಲ್ಲರೂ ನುಗ್ಗುತ್ತೇವೆ. ಓಡುತ್ತಿರುವ ಮೆಟ್ರೋದಲ್ಲಿ, ನಿಂತ ವಿಮಾನಗಳಲ್ಲಿ, ಟಿಕೇಟಿನ ಸಾಲುಗಳಲ್ಲಿ, ಇನ್ನೊಬ್ಬರ ಮೈಗೆ ನಮ್ಮ ಮೈಯನ್ನೋ, ಬ್ಯಾಗನ್ನೋ ತಾಗಿಸಿಯೇ ನಿಲ್ಲುತ್ತೇವೆ. ನನ್ನ ಸಂತೋಷ, ದುಃಖ, ಅದ್ಯಾರದ್ದೋ ಬಗೆಗಿನ ತಿರಸ್ಕಾರ, ದುಮ್ಮಾನಗಳನ್ನು ಉಳಿದವರಿಗೆ ಕೇಳಿಸುವ ಅಗತ್ಯವಿಲ್ಲದಿದ್ದರೂ ಜೋರಾಗಿಯೇ ಮಾತನಾಡುತ್ತೇವೆ. ಫೋನ್ಕಾಲುಗಳದ್ದೂ ಅದೇ ಕಥೆ. ಲಿಫ್ಟುಗಳಲ್ಲಿ, ಕಾರಿಡಾರುಗಳಲ್ಲಿ ನಡೆಯುವಾಗ ಎದುರಾದವರೆಡೆಗೆಗೊಂದು ಸೌಜನ್ಯದ ನಗೆಯಾಗಲೀ, ಗುಡ್ಮಾರ್ನಿಂಗ್ ಗುಡೀವನಿಂಗ್ ಆಗಲೀ, ರಿಸೆಪ್ಷನ್/ಸೇಲ್ಸ್ ಟಿಲ್/ಟೋಲ್-ಗೇಟುಳಲ್ಲಿರುವ ಜನರೆಡೆಗೆ ಒಂದು ಥ್ಯಾಂಕ್ಸ್ ಆಗಲೀ ಹೇಳಲಾಗದಷ್ಟು ಬಡವರು ನಾವು. ಇದೇ ಅಭ್ಯಾಸಗಳನ್ನು ಬೇರೆಕಡೆ ಹೋದಾಗಲೂ ಮುಂದುವರೆಸುತ್ತೇವೆ. ಭಾರತದಲ್ಲಿ ಹೇಗೋ ಗೊತ್ತಿಲ್ಲ, ಬಹಳಷ್ಟು ದೇಶಗಳಲ್ಲಿ ರೆಸ್ಟೋರೆಂಟ್ ವೈಟರುಗಳಿಗೆ ಸಂಬಳ ಕಮ್ಮಿಯಿಟ್ಟು, ಗ್ರಾಹಕರಿಗೆ ಉತ್ತಮ ಸೇವೆ ಕೊಟ್ಟು ಅದಕ್ಕವರು ಟಿಪ್ಸ್ ಪಡೆಯುವ ವ್ಯವಸ್ಥೆಯಿದೆ. ಅದರ ಬಗ್ಗೆ ಕನಿಷ್ಟ ರೀಸರ್ಚ್ ಕೂಡಾ ಮಾಡದೇ ಆ ದೇಶಗಳಿಗೆ ಹೋಗಿ, ಅಲ್ಲಿ ಟಿಪ್ಸ್ ಇಡದೇ ಬರುವ ಭಾರತೀಯರೆಂದರೆ ಆ ವೈಟರುಗಳಿಗೂ ಅಷ್ಟಕ್ಕಷ್ಟೇ.

ಒಟ್ಟಿನಲ್ಲಿ ಭಾರತೀಯ ಪ್ರವಾಸಿಗಳೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನ ಸ್ವಲ್ಪ ಹುಳಿಮುಖ ಮಾಡುವುದು ಸಹಜ. ನಮ್ಮಜನರ ವರ್ತನೆಗಳ ಅನುಭವವಿರುವ ನನಗೆ ಅದರಲ್ಲೇನೂ ಆಶ್ಚರ್ಯವಿಲ್ಲ. ಭಾರತೀಯರೆಡೆಗಿರುವ ಇಂತಹದೊಂದು ಗ್ರಹಿಕೆಯನ್ನು ಕಡಿಮೆಮಾಡುವೆಡೆಗೆ ನನ್ನ ಕೈಲಾದಷ್ಟು ಪ್ರಯತ್ನವನ್ನಂತೂ ನಾನು ಮಾಡುತ್ತೇನೆ. ನನ್ನದಲ್ಲದ ಯಾವ ವಸ್ತುವನ್ನೂ ಮುಟ್ಟದ, ತೆಗೆದುಕೊಳ್ಳದ, ಪಡೆದ ಸೇವೆಗೊಂದು ಥ್ಯಾಂಕ್ಸ್ ಹೇಳುವ ಭಾರತೀಯರಾಗುವ ಮೂಲಕ ನಮ್ಮ ದೇಶಕ್ಕೂ ಹೆಮ್ಮೆ ತರೋಣ.

ಹೋಟೆಲ್ ರೂಮಿನಲ್ಲಿದ್ದ ಶಾಂಪೂ, ಸೋಪು, ಟೀಬ್ಯಾಗು ತೆಗೆದುಕೊಳ್ಳದೇ ಬಂದವರು ಇಡೀ ಜಗತ್ತಿನಲ್ಲೇ ಯಾರೂ ಇಲ್ಲ. ಎಲ್ಲಾದೇಶದವರೂ ಅದನ್ನು ಒಂದಲ್ಲೊಂದು ಕಡೆ ಮಾಡಿರುತ್ತಾರೆ. ಅದನ್ನು “ಕದಿಯೋದು” ಅನ್ನೋದೂ ಇಲ್ಲ. ಯಾಕಂದ್ರೆ ನೀವು ಬಳಸದಿದ್ದರೂ/ಅರ್ಧ ಬಳಸಿಟ್ಟರೂ ಅದು ಮತ್ತೆ ರಿಪ್ಲೇಸ್ ಆಗೇ ಆಗುತ್ತದೆ. ರೂಮಿನ ಮಿನಿಬಾರಿನಲ್ಲಿದ್ದ ಲೇಯ್ಸ್ ಚಿಪ್ಸ್ ಅಥವಾ ಚಾಕಲೇಟು ತಿಂದು, ಸಂಜೆ ಹೊರಗೆ ಹೋದಾಗ ಅದೇ ಬ್ರಾಂಡಿನ ತಿನಿಸುಗಳನ್ನು ವಾಪಾಸು ಇಟ್ಟು ನೂರಾರು ರೂಪಾಯಿ ಬಿಲ್ ತಪ್ಪಿಸಿಕೊಳ್ಳುವುದನ್ನೂ ನಾನು ತಪ್ಪು ಅನ್ನಲ್ಲ. ಆದರೆ ಹ್ಯಾಂಗರ್ರು, ಹೇರ್ ಡ್ರೈಯರ್, ಬಾತ್-ರೋಬ್, ಲೈಟುಗಳು ಇವನ್ನೆಲ್ಲಾ ತೆಗೆದುಕೊಂಡು ಬರೋದು ತೀರಾ ಅಕ್ಷಮ್ಯ. ಹಾಗೆಯೇ ಕಾಫಿಮೇಕರ್ ಹತ್ರ ಇಟ್ಟ ಚಮಚ, ಕಾಫಿ ಮಗ್ಗು, ಟೀವಿ ರಿಮೋಟಿನ ಸೆಲ್ಲು ಇವನ್ನೆಲ್ಲಾ ತೆಗೆದುಕೊಳ್ಳೋದು ಕಳ್ಳತನ ಅನ್ನೋದು ಸಾಯ್ಲಿ, ತೀರಾ ಚೀಪ್’ನೆಸ್. ಹೋಟೆಲ್ ರೂಮ್ ಬುಕಿಂಗ್ ಕಂಪೆನಿಯಾದ IXIGO, ಇಂತಹಾ ಗೊಂದಲ ನಿವಾರಿಸೋದಕ್ಕೆ, ಹೋಟೆಲ್ ರೂಮಿನಿಂದ ಏನನ್ನು ತೆಗೆದುಕೊಂಡು ಹೋಗಬಹುದು, ಯಾವುದನ್ನ ಮುಟ್ಟಬಾರದು ಅಂತಾ ಒಂದೊಳ್ಳೆಯ ವಿಡಿಯೋ ಮಾಡಿದ್ದಾರೆ, ನೋಡಿ.

ಕೊಸರು:

(*) ಭಾರತೀಯರ ಬಗ್ಗೆ ಮಾತ್ರ ಯಾಕೆ ಈ ರೀತಿ ಅಪವಾದ. ಪಾಕಿಗಳ ಬಗ್ಗೆ, ಬಾಂಗ್ಲಾಗಳ ಬಗ್ಗೆ ಯಾಕಿಲ್ಲ? ಅಂತಾ ನಿಮಗೆ ಅನುಮಾನ ಬಂದಿರಬಹುದು. ಈ ರೀತಿ ಅನುಭವ ಆತಿಥೇಯರಿಗೆ ಆಗಬೇಕಾದರೆ, ಜನ ಅಲ್ಲಿಗೆ ಪ್ರವಾಸಿಗಳಾಗಿ ಹೋಗಬೇಕು. ಪ್ರವಾಸಕ್ಕೆ ಹೋಗೋಕೆ ದುಡ್ಡು ಬೇಕು. ಪಾಕಿ/ಬಂಗಾಲಿಗಳ ಕೈಲಿ ಅಷ್ಟೆಲ್ಲಾ ದುಡ್ಡಿದ್ರೆ, ಊರಲ್ಲಿ ಎರಡಂತಸ್ತಿನ ಮನೆ ಕಟ್ತಾರೆ. ಆಮೇಲೆ ಪ್ರವಾಸ ಅದೂ ಇದೂ ಎಲ್ಲಾ. ಭಾರತೀಯರು ಹಾಗಲ್ಲ. ನಮ್ ಎಕಾನಮಿ ಸಕ್ಕಾತ್ತಾಗಿದೆ. ಈಗಂತೂ ನಮ್ ಹತ್ರ ದುಡ್ಡಿದೆ. ತಿರುಗ್ತೀವಿ. ಗಬ್ಬೆಬ್ಬಿಸ್ತಾ ಇದ್ದೀವಿ. ಅವರೆಲ್ಲಾ ನಾವು 1970ರಲ್ಲಿ ಹೇಗಿದ್ವೋ ಹಾಗಿದ್ದಾರೆ. ಅವರ ಬಳಿ ಅಷ್ಟೆಲ್ಲಾ disposable income ಬರಬೇಕಾದರೆ ಇನ್ನೂ ಕನಿಷ್ಟ ಇಪ್ಪತ್ತೈದು ವರ್ಷ ಬೇಕು. ಆಗ ಈ ಕಥೆಗಳು ಅವರ ಹೆಸರಲ್ಲೂ ಬರುತ್ವೆ 🙂 ಅವರೆಡೆಗೆ ನಗುವ ಮೊದಲು ನಾವು ಸುಧಾರಿಸಿಕೊಳ್ಳೋಣ. ನಾಳೆ ಪಾಕಿಯೊಬ್ಬ ಹೋಟೆಲಲ್ಲಿ ಏನೋ ಕದ್ದು ಸಿಕ್ಕಿಹಾಕಿಕೊಂಡಾಗ ಆ ಹೋಟೆಲಿವನರು “ಎಲ್ಲಿಂದಾ ಕಲಿತ್ಯಪ್ಪಾ ಇಂತಾ ಬುದ್ಧಿ” ಅಂದರೆ, ಆತ ನಮ್ಮ ಕಡೆ ಬೆರಳುತೋರಿಸದಂತಾಗಲಿ.

(*) ನನಗೆ ಇದೇ ರೀತಿ ಸ್ಟೀರಿಯೋಟಿಪಿಕಲ್ ಭಾವನೆ ಎಲ್ಲಾ ದೇಶದವರ ಮೇಲೂ ಇದೆ. ಬಂಗಾಲಿಗಳು ಜಿಪುಣರು, ಪಠಾಣರು ಕೊಳಕರು, ಬ್ರಿಟೀಷರು ಸಿಡುಕರು, ಅಮೇರಿಕನ್ನರು ಕೇರ್ಲೆಸ್ಸು ಹೀಗೇ ಬಹಳಷ್ಟು ನನ್ನ ಮನಸ್ಸಲ್ಲೂ ಇದೆ. ಆಗಾಗ ಅದನ್ನ ಒರೆಗೆ ಹಚ್ಚುತ್ತಿರುತ್ತೇನೆ. ಸರಿಪಡಿಸಿಕೊಳ್ಳುತ್ತೇನೆ. ಆದರೆ ನಾನು ವೈಟರುಗಳು ಮೊದಲ ಬಾರಿಗೆ ನನ್ನ ಟೇಬಲ್ಲಿಗೆ ಬಂದಾಗಲೇ ನಾನು “ನೋಡಪ್ಪಾ, ನೀವು ನೋಡಿದ ಉಳಿದ ಭಾರತೀಯರಂತೆ ನಾನಲ್ಲ. ನಿನಗೆ ಸಿಗುವ ಟಿಪ್ಸು ನಿನ್ನ ಸೇವೆಯ ಮೇಲೆ ನಿರ್ಧಾರವಾಗುತ್ತೆ. ನೆನಪಿಟ್ಕೋ” ಅಂತಾ ಬಾಯಿಬಿಟ್ಟು ಹೇಳಿಬಿಡುವುದುಂಟು. ಇದು ಯಾಕೆಂದರೆ, ನಾನು ಯೂಕೆನಲ್ಲಿದ್ದಾಗ ಈ ರೀತಿಯ “ಬ್ಲಡಿ ಇಂಡಿಯನ್” ಸ್ಟೀರಿಯೋಟೈಪನ್ನು ಬಹಳ ಅನುಭವಿಸಿದ್ದೇನೆ. ಅಲ್ಲಿನ ವೈಟರುಗಳು ಬ್ರಿಟೀಷ್ ಅಥವಾ ಪೋಲಿಷ್/ಆಫ್ರಿಕನ್ನರು. ಇಲ್ಲಿ ಮಧ್ಯಪ್ರಾಚ್ಯಕ್ಕೆ ಬಂದಮೇಲೆ ಇಲ್ಲಿ ಹೆಚ್ಚಿನ ಸರ್ವರುಗಳು ಫಿಲಿಪಿನೋಗಳು ಅಥವಾ ಪೂರ್ವ ಯೂರೋಪಿಯನ್ನರು. ಎರಡೂ ಕಡೆಯಲ್ಲಿ ವೈಟರುಗಳು “ಇವ ಇಂಡಿಯನ್. ಹಾಗಾಗಿ ಇವ ಟಿಪ್ಸ್ ಕೊಡೋದಿಲ್ಲ. ಕೊಟ್ಟರೂ ಜಾಸ್ತಿ ಕೊಡಲಿಕ್ಕಿಲ್ಲ” ಅನ್ನೋ ಭಾವನೆಯಲ್ಲಿರ್ತಾರೆ. ಹಾಗಾಗಿ ಅವರು ಕೊಡುವ ಸೇವೆಯೂ ಕೆಲವೊಮ್ಮೆ ಅಷ್ಟಕ್ಕಷ್ಟೇ ಇರುತ್ತದೆ. ಅವರ ಸೇವೆ ಬರೀ ಅಷ್ಟಷ್ಟೇ ಇದ್ದಾಗ ಟಿಪ್ಸ್ ಕೊಡೋಕೆ ನಿಮಗೂ ಮನಸ್ಸು ಬರಲ್ಲ. ಒಂದಿನ ನಾನಿಲ್ಲಿನ ಪಂಚತಾರಾ ಹೋಟೆಲೊಂದರಲ್ಲಿದ್ದೆ. ಅಲ್ಲಿನ ವೈಟರು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಯಾಕೆಂದರೆ ಉಳಿದವರೆಲ್ಲಾ ಕರೆದಕೂಡಲೇ ಬಂದು ಸರ್ವ್ ಮಾಡುತ್ತಿದ್ದವ ನಾನು ಕರೆದರೆ ಮಾತ್ರ ನಾಪತ್ತೆ. ಎರಡುಬಾರಿ ನಾನು ಕೇಳಿದ್ದೇ ಒಂದು, ಅವ ತಂದದ್ದೇ ಇನ್ನೊಂದು! ಕೊನೆಗೆ ಹೊರಡುವ ಮುನ್ನ, ಅವನನ್ನು ಮತ್ತು ಫ್ಲೋರ್ ಮ್ಯಾನೇಜರ್ ಇಬ್ಬರನ್ನೂ ಕರೆದು ಬಿಲ್ಲಿನ ಹಣ ಪಾವತಿ ಮಾಡಿ, ಜೇಬಿನಿಂದ ಐವತ್ತು ದಿರಹಂ ಹೊರಗೆ ತೆಗೆದು “ಈ ಹಣ ನಾನು ಇವನಿಗೆ ಟಿಪ್ಸ್ ಕೊಡಬೇಕು ಅಂತಲೇ ಇಟ್ಟುಕೊಂಡದ್ದು. ಆದರೆ ಇವನ ಸರ್ವೀಸು ನನಗಿಷ್ಟವಾಗಲಿಲ್ಲ. ಆದ್ದರಿಂದ ಈ ಟಿಪ್ಸು ಕೊಡುತ್ತಿಲ್ಲ FYI” ಅಂತ ಹೇಳಿ ಮರಳಿ ಜೇಬಿಗಿಟ್ಟೆ. ಅವತ್ತಿಂದ ಇವತ್ತಿನವರೆಗೂ ನಾನು ಹೊಸ ಹೋಟೆಲುಗಳಿಗೆ ಹೋದರೆ ಟಿಪ್ಸಿನ ವಿಚಾರ ಮೊದಲಿಗೇ ಹೇಳಿಬಿಡುತ್ತೇನೆ. ಕೆಲ ಹೋಟೆಲುಗಳಲ್ಲಿ ಸರ್ವೀಸ್ ಚಾರ್ಜ್ ಅಂತಾ ಮೊದಲೇ ಸೇರಿಸಿಬಿಟ್ಟಿರುತ್ತಾರೆ. ಅಂತಾಕಡೆ ನಾನು ಟಿಪ್ಸ್ ಕೊಡುವುದಿಲ್ಲ. ಸರ್ವೀಸ್ ಇಷ್ಟವಾಗಿಲ್ಲವೆಂದರೆ ಜಗಳ ಮಾಡಿ ಬಿಲ್ಲಿನಿಂದ ಸರ್ವೀಸ್ ಚಾರ್ಜ್ ತೆಗೆಸಿದ್ದೂ ಇದೆ.

ನನ್ನ ಹಾಗೂ ಯಾವ ಭಾರತೀಯರ ಬಗ್ಗೆಯೂ ಯಾರಿಗೂ ಕೆಟ್ಟ ಸ್ಟಿರಿಯೋಟೈಪು ಬರುವ ಹಾಗೆ ನಾನು ನಡೆದುಕೊಳ್ಳಲ್ಲ. ನೀವೂ ಪ್ರಯತ್ನಿಸುತ್ತೀರಿ ತಾನೇ?

#ರಾಘವಾಂಕಣ

Video credit and copyright: ixigo

ರಷ್ಯನ್ ಸಿಂಪ್ಸನ್

ಇದೊಂದು ರಷ್ಯನ್ ಅಮಿನೇಷನ್ ವಿಡಿಯೋ(V1)ವನ್ನ ರೊಮೇನಿಯನ್ ಒಬ್ಬ ವಿವರಿಸ್ತಾ ಇರೋ ವಿಡಿಯೋ (V2).

ಯಾರಿಗಾದರೂ ‘ಅಂದಿನಕಾಲದ’ ಕಮ್ಯೂನಿಸ್ಟ್ ಮತ್ತು ಸೋಷಿಯಲಿಸ್ಟ್ ದೇಶಗಳಲ್ಲಿ ಜೀವನ ಅಂದ್ರೆ ಹೇಗಿತ್ತು ಅಂತಾ ತಿಳಿದುಕೊಳ್ಳೋ ಆಸೆಯಿದ್ದರೆ, ಇದೊಂದು ನೋಡಲೇಬೇಕಾದ ವಿಡಿಯೋ. ನಿರೂಪಕನಿಗೆ ಬಹಳ ದಪ್ಪದ ರಷ್ಯನ್ ಆಕ್ಸೆಂಟ್ ಇದೆ. ಅದನ್ನ ಸ್ವಲ್ಪ ಗಮನಕೊಟ್ಟು ಅರ್ಥ ಮಾಡ್ಕೊಂಡ್ರೆ, ಇದೊಂದು ಒಳ್ಳೆಯ insight ಕೊಡೋ ವಿಡಿಯೋ.

ಈ ವಿಡಿಯೋ ಎರಡು ಕಾರಣಗಳಿಗೆ ಕುತೂಹಲಕಾರಿ:

(1) V1 ಇದು, The Simpsons ಎಂಬ ಪ್ರಸಿದ್ಧ ಅಮೇರಿಕನ್ ಕಾಮಿಡಿ ಸೀರೀಸಿನ ರಷ್ಯನ್ ಅವತರಣಿಕೆ ಬಂದಿದ್ದರೆ ಅದರ ಪಾತ್ರಗಳು ಮತ್ತು ಗ್ರಾಫಿಕ್ಸ್ ಹೇಗಿದ್ದಿರಬಹುದು ಎಂಬುದರ ಇಣುಕುನೋಟ.

(2) ಈ V1ನಲ್ಲಿರುವ ಅಟೆನ್ಷನ್ ಟು ಡೀಟೇಲ್. ಆ V1 ಇದ್ಯಲ್ಲಾ, ಅದು ಇರೋದೇ 70 ಸೆಕೆಂಡು. ಹಾಗಂತಾ ಸುಮ್ಮನೇ ಕಾಟಾಚಾರಕ್ಕೆ ಮಾಡಿ ಬಿಸಾಕಿಲ್ಲ. ಸಣ್ಣಸಣ್ಣ ವಿಷಯಕ್ಕೂ ಡಿಸೈನರುಗಳು/ನಿರ್ದೇಶಕ ಕೊಟ್ಟಿರೋ ಗಮನ ಇದ್ಯಲ್ಲಾ, ಅದು ಸಕ್ಕತ್. ಅದನ್ನೇ ಈ ಚಾನೆಲ್ಲಿನ ನಿರೂಪಕ V2ನಲ್ಲಿ ವಿವರಿಸ್ತಾ ಇರೋದು.

ಎಂಜಾಯ್ ಮಾಡಿ.

https://www.youtube.com/watch?v=aio-tQa801g