ಜಗತ್ತಿನ ತುದಿಯಾಚೆಯ ಪಯಣ ಹಾಗೂ ಸುಂದರ ಪೂಜಾರಿಯವರ ಮನೆ:

ನಾನು ಹುಟ್ಟಿದ ಮೊದಲ ಹತ್ತು ವರ್ಷ ಬೆಳೆದದ್ದು, ಸಿದ್ದರಮಠ ಎಂಬ ಹಳ್ಳಿಯಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಒಂದು ಗ್ರಾಮ. ನನ್ನ ಜೀವನಕ್ರಮ, ನನ್ನ ಯೋಚನಾಲಹರಿ, ಜಗತ್ತಿನೆಡೆಗೆ ನನ್ನ ನೋಡುವಿಕೆ ಹೆಚ್ಚಿನೆಲ್ಲವೂ ರೂಪುಗೊಂಡದ್ದು ಇಲ್ಲೇ. ದೇವರು, ನಂಬಿಕೆ, ಶಿಕ್ಷಣ, ಜಾತಿ, ಊಟ, ಆಟ, ಸ್ನೇಹ, ಜೀವನ, ಹೆಣ್ಣು, ಸಾವು, ರಾಷ್ಟ್ರ ಇವೆಲ್ಲದರ ಬಗ್ಗೆ (ಇನ್ನೂ ಹಲವು ಸಾವಿರ ವಿಷಯಗಳ ಬಗ್ಗೆ) ನನ್ನ ಮೊದಲ ಅಭಿಪ್ರಾಯಗಳು ಮಾಂಸ-ಮಜ್ಜೆ ತುಂಬಿಕೊಂಡದ್ದರಲ್ಲಿ ಸಿದ್ದರಮಠದ ಪಾತ್ರ ದೊಡ್ಡದು. ಇಡೀ ಗ್ರಾಮದಲ್ಲಿ ಇದ್ದದ್ದು ಸುಮಾರು ಒಂದು ಐವತ್ತು ಮನೆಗಳು. ಸುತ್ತಮುತ್ತಲಿನ ಕಲ್ಲಾರ್ಸುಳಿ, ಮಾತಗಾರು, ಕರಿಗೆರಸಿ, ದರ್ಕಾಸು, ಕೆಲಕುಳಿ ಎಲ್ಲಾ ಸೇರಿಸಿದ್ರೆ ಅಬ್ಬಬ್ಬಾ ಅಂದ್ರೆ ಇನ್ನೊಂದೈವತ್ತು ಮನೆ ಸೇರ್ತಿದ್ವೇನೋ.

ಇಡೀ ಗ್ರಾಮ, ಕೊಪ್ಪ-ಮೃಗವಧೆ ರಸ್ತೆಯ ಆಚೀಚೆ ಬದಿ ಒಂದೆರಡು ಕಿಲೋಮೀಟರಿನಷ್ಟು ಉದ್ದದಲ್ಲಿ ಬೆಳೆದದ್ದು. (ಹೆಸರಿಗೆ ಮಾತ್ರ ಆ ರಸ್ತೆ ಮೃಗವಧೆ ತನಕ ಹೋಗ್ತಾ ಇದ್ದದ್ದು. ಆ ಟಾರು ರಸ್ತೆ ಸಿದ್ದರಮಠ ದಾಟಿ ಒಂದೆರಡು ಕಿಲೋಮೀಟರ್ ಹೋಗುತ್ತಿದ್ದಂತೇ ಮಾಯವಾಗಿ ಚಂದ್ರಲೋಕವಾಗಿ ಬಿಡ್ತಾ ಇತ್ತು. ಆ ರಸ್ತೆಯಲ್ಲೇನಾದ್ರೂ ಮೃಗವಧೆಗೆ ಹೊರಟ್ರೆ ಅಲ್ಲಿಗೆ ತಲುಪೋಹೊತ್ತಿಗೆ ನೀವು ಸರ್ಕಾರದ ಮೇಲಿನ ಸಿಟ್ಟಿನಲ್ಲಿ ಮೃಗವಾಗಿ ಬಿಡ್ತಾ ಇದ್ರಿ ಅಷ್ಟೆ). ಸಿದ್ದರಮಠದ ಒಂದು ತುದಿಯಲ್ಲಿದ್ದದ್ದು ‘ಬಸವನ ಕಟ್ಟೆ’. ಅಲ್ಲೊಂದು ಸಣ್ಣ ನಂದಿ ಕೂರಿಸಿದ್ರು. ಅಲ್ಲಿಂದ ಶುರುವಾದ ಹಳ್ಳಿ, ಒಳ್ಳೆ ಹಳ್ಳಿ ಹುಡುಗಿ ಬೈತಲೆ ಥರಾ ನೇರವಾಗಿ ಕೆಳಗಿಳಿದು ದೇವಸ್ಥಾನದಲ್ಲಿ ಕೊನೆಯಾಗ್ತಾ ಇತ್ತು. ಎಷ್ಟು ನೇರ ಅಂದ್ರೆ. ಬಸವನ ಕಟ್ಟೆಯಲ್ಲಿ ನಿಂತರೆ ಒಂದೊಂದೂವರೆ ಕಿಲೋಮೀಟರ್ ದೂರದಲ್ಲಿ ಕೆಳಗೆ ದೇವಸ್ಥಾನ ನಿಚ್ಚಳವಾಗಿ ಕಾಣ್ತಾ ಇತ್ತು. ಆ ರಸ್ತೆ ದೇವಸ್ಥಾನದ ಹತ್ತಿರ ಬಂದಕೂಡ್ಲೇ ರಸ್ತೆ ಸ್ವಲ್ಪ ಎಡಕ್ಕೆ ತಿರುಗಿ ಮುಂದುವರೆಯುತ್ತಿದ್ದರಿಂದ, ಮೊದಲ ಬಾರಿಗೆ ಹಳ್ಳಿಗೆ ಬಂದವರಿಗೆ ಅಥವಾ ದೂರದಿಂದ ನೋಡಿದವರಿಗೆ ದೇವಸ್ಥಾನದ ಹತ್ತಿರ ರಸ್ತೆ ಮುಗೀತಾ ಇದೆ, ಅಲ್ಲಿಂದ ಮುಂದೆ ಏನೂ ಇಲ್ಲ ಅಂಥಾ ಕಾಣ್ತಿತ್ತು. ನಮ್ಮ ಕ್ವಾರ್ಟರ್ಸ್ ಬಸವನ ಕಟ್ಟೆಗೂ, ದೇವಸ್ಥಾನಕ್ಕೂ ಮಧ್ಯದಲ್ಲಿ ಇದ್ದದ್ದು. ಸಂಜೆಯಾದ್ರೆ ನಾನು ಆ ರಸ್ತೆಮೇಲೆ ನಿಂತುಕೊಂಡು ಬಸನವ ಕಟ್ಟೆಯಲ್ಲಿರೋ ಬಸವನಿಗೂ, ಈ ಕಡೆ ಇದ್ದ ಸಿದ್ದೇಶ್ವರನಿಗೂ ನನ್ನ ಕಥೆ ಹೇಳ್ತಾ ಇದ್ದೆ. ಒಂಥಾ ಮೂರು ಜನ ಸ್ನೇಹಿತರು ಅಕ್ಕ ಪಕ್ಕದಲ್ಲಿ ನಿಂತು ಮಾತಾಡ್ತಾ ಇದ್ದಹಾಗೆ.

ಹೆಸರಿಗೆ ತಕ್ಕಂತೆ ‘ಸಿದ್ದರಮಠ’, ಒಂದು ಪುಟ್ಟ ಮಠದ ಸುತ್ತ ಬೆಳೆದ ಗ್ರಾಮ. ಎಲ್ಲಾ ಬಿಟ್ಟು ಆ ದೊಡ್ಡ ಕಾಡಿನ ಮಧ್ಯೆ ಅದನ್ಯಾಕೆ ಕಟ್ಟಿದ್ರೂ ಅಂಥಾ ನನಗಿವತ್ತೂ ಗೊತ್ತಿಲ್ಲ. ಮಠ ಅನ್ನೋದಕ್ಕಿಂತ ದೇವಸ್ಥಾನ ಅನ್ನಬಹುದು. ಯಾಕಂದ್ರೆ ನಾನು ಅವತರಿಸಿದಾಗ ಅಲ್ಲಿ ಯಾವ ಗುರುಗಳೂ ಇರಲಿಲ್ಲ (ಮೊದಲು ಇದ್ರೇನೋ, ಯಾರಿಗೂ ಗೊತ್ತಿಲ್ಲ). ಪೂಜೆ ಮಾಡ್ಲಿಕ್ಕೆ ಒಬ್ರು ಭಟ್ರು ಇದ್ರು ಅಷ್ಟೇ. ಅವರಿಗೆ ದೇವಸ್ಥಾನದ ಆವರಣದಲ್ಲೇ ಮನೆ. ಮಲೆನಾಡು ಹಾಗೂ ಕರಾವಳಿಯ ದೇವಸ್ಥಾನಗಳಲ್ಲಿ ಮಧ್ಯದಲ್ಲಿ ದೇವರಗುಡಿಯಿದ್ದು, ಸುತ್ತಲೂ ಕಟ್ಟಿದ ಆವರಣದಲ್ಲಿ ಪೂಜೆಭಟ್ರು ಮನೆ, ಉಗ್ರಾಣ, ಮತ್ತೊಂದೆರಡು ಸಣ್ಣ ದೇವರ ಗುಡಿಗಳಿರುವುದು ಸಾಮಾನ್ಯ. ಸಿದ್ದರಮಠದ ದೇವಸ್ಥಾನದಲ್ಲಿ ಭಟ್ರ ಮನೆ ಮಾತ್ರವಲ್ಲದೇ, ಒಂದು ಸಣ್ಣ ಪೋಸ್ಟಾಪೀಸು, ಯಾರಾದರೂ ಹೊರಗಿನಿಂದ ಬಂದವರಿಗೆ ಉಳಿದುಕೊಳ್ಳಲು ಒಂದೆರಡು ರೂಮುಗಳೂ ಇದ್ದವು. ದೇವಸ್ಥಾನದ ಹೊರಬದಿಯಲ್ಲಿ ಬಲಬಾಗದ ಕೊನೆಯಲ್ಲಿ ನಾಲ್ಕು ಎತ್ತರದ ಗೋಡೆಯೆಬ್ಬಿಸಿ ಅದರಲ್ಲಿ ದೇವಸ್ಥಾನದ ರಥ ನಿಲ್ಲಿಸುತ್ತಿದ್ದರು. ಆ ರಥದಮನೆಯ ಬಲಗೋಡೆ ಪಕ್ಕದಲ್ಲಿ ಒಂದು ಸಣ್ಣ ಗುಡ್ಡದ ತರಹದ elevation (ಮಲ್ನಾಡು ಭಾಷೆಯಲ್ಲಿ ಧರೆ ಅಂತೀವಿ) ಇತ್ತು. ನಮ್ಮ ಮನೆಯಿಂದ ನೋಡಿದರೆ, ರಸ್ತೆ ಹೋಗಿ ದೇವಸ್ಥಾನದ ಹತ್ತಿರ ಕೊನೆಯಾಗ್ತಾ ಇದ್ದಂತೆಯೂ. ಆ ದೇವಸ್ಥಾನ ರಸ್ತೆಯ ಒಂದು ತುದಿಯಿಂದಾ ಇನ್ನೊಂದು ತುದಿಯವರೆಗೂ ಹರಡಿಕೊಂಡಿದ್ದರಿಂದಲೂ, ಈ ರಥದ ಮನೆಯ ಹಿಂಬಾಗಕ್ಕೆ ಹೋಗುವಂತಿರಲಿಲ್ಲದಿದ್ದರಿಂದಲೂ, ನಾನು ಅವತ್ತಿನ ಮಟ್ಟಿಗೆ ನಾನು ‘ಜಗತ್ತು ಬಹುಷಃ ಇಲ್ಲಿಗೆ ಕೊನೆ. ಈ ರಥದ ಮನೆಯಾಚೆಗೆ ಏನೂ ಇಲ್ಲ’ ಅಂಥಾ ಅಂದುಕೊಂಡಿದ್ದೆ. ನನ್ನ ಪ್ರಾಬ್ಲಮ್ ಶುರುವಾಗಿದ್ದೇ ಇಲ್ಲಿಂದ.

ಮೊದಲೇ ನನಗೆ ಜೀವನದಲ್ಲಿ ಅಗತ್ಯಕ್ಕಿಂತಾ ಸ್ವಲ್ಪ ಹೆಚ್ಚೇ ಕುತೂಹಲ (ಅದಕ್ಕೇ ಜೀವನದಲ್ಲಿ ನನಗೆ ಇಷ್ಟೊಂದು ತೊಂದರೆಗಳು ಬಂದಿರುವುದು ಅಂಥಾ ನನ್ನ ಅಚಲ ಭಾವನೆ  ) ಅದ್ಯಾಕೆ ಈ ರಥದ ಮನೆ ಹಿಂಬಾಗಕ್ಕೆ ಹೋಗೋಕೆ ಆಗ್ತಾ ಇಲ್ಲ, ಎಲ್ಲಿಂದ ದಾರಿ ಇದಕ್ಕೆ ಅಂಥಾ ಹುಡುಕಿ ಹುಡುಕಿ ಬೇಸತ್ತಿದ್ದೆ. ಕೊನೆಗೆ ಪ್ರಯತ್ನ ಕೈಬಿಟ್ಟಿದ್ದೆ. 
ಒಂದು ದಿನ ಭಾನುವಾರ ಮಧ್ಯಾಹ್ನ ಹೀಗೇ ರಸ್ತೆಯಲ್ಲಿ ಆಟ ಆಡ್ತಾ ಇದ್ದೆ (ಊರಿಗೆ ಇದ್ದಿದ್ದೇ ಒಂದು ಬಸ್ಸು, ಬೆಳಿಗ್ಗೆ ಹೋದ್ರೆ ಬರ್ತಾ ಇದ್ದದು ಸಂಜೆಯೇ. ಊರಲ್ಲಿ ಬೈಕು ಕಾರು ಏನೂ ಇರ್ಲಿಲ್ಲ. ಅಕಸ್ಮಾತ್ ಬಂದ್ರೂ, ಆ ನಿಶ್ಯಬ್ದದ ಹಳ್ಳಿಯಲ್ಲಿ ಮೂರು ಕಿಲೋಮೀಟರ್ ಮುಂಚೇನೇ ಶಬ್ದ ಕೇಳ್ತಾ ಇತ್ತು. ಆದ್ದರಿಂದ ರಸ್ತೆ ನಮ್ಮ ಆಟದ ಮೈದಾನದ ಒಂದು ಬಡಾವಣೆಯೇ ಅಗಿತ್ತು. ರಸ್ತೆಯಲ್ಲಿ ಆಡೋದಕ್ಕೂ, ಮನೆ ಮುಂದೆ ಆಡೋದಕ್ಕೂ ಅಷ್ಟೊಂದೇನು ಹೇಳುವಷ್ಟು ವ್ಯತ್ಯಾಸವೇ ಇರಲಿಲ್ಲ. ಹೆಚ್ಚೆಂದರೆ ಜೂಟಾಟ ಆಡಿ ಮನೆ ಮುಂದೆ ಬಿದ್ರೆ ಕಲ್ಲು-ಗಿಲ್ಲು ತಾಗಿ ರಕ್ತ ಬರುವಷ್ಟು ಗಾಯ ಆಗ್ತಿತ್ತು, ರಸ್ತೆಯಲ್ಲಿ ಬಿದ್ರೆ ತರಚಿ ಚರ್ಮ ಸುಲಿದು ರಕ್ತ ಬರುವಷ್ಟು ಗಾಯ ಆಗ್ತಿತ್ತು, ಅಷ್ಟೇ ವ್ಯತ್ಯಾಸ). ದೇವಸ್ಥಾನದ ಹತ್ತಿರ ಮನೆಯಿದ್ದ ಮಹಾಬಲರಾಯರ ಮಗ ಸುಭಾಶು ಕೂಗಿ ಕರೆದ. ನಾನು ಅಮ್ಮನ ಹತ್ರ ಹೋಗಿ ‘ಅಮ್ಮಾ ಸುಭಾಶು ಕರೀತಾ ಇದ್ದಾನೆ. ಹೋಗಿ ಬರ್ತೀನಿ ಅಂದೆ’ ‘ಎಲ್ಲಿಗೆ’ ಅಂದ್ರು? ‘ಎಲ್ಲಿಗೂ ಇಲ್ಲ ರಥದ ಹತ್ರ ಆಟ ಆಡ್ತಾ ಇರ್ತೀವಿ’ ಅಂದೆ. ಅಮ್ಮ ಏನೋ ಸಿಟ್ಟಲ್ಲಿದ್ರು. ‘ರಥದ ಹತ್ರನಾದ್ರೂ ಹೋಗು, ಅದರಿಂದ ಆಚೆನಾದ್ರೂ ಹೋಗು’ ಅಂದ್ರು. ನಾನು ಅವಕ್ಕಾದೆ. ಒಂದ್ಸಲ ಮೈಯೆಲ್ಲಾ ಜುಂ ಅಂತು. ಸುಮ್ನೆ ‘ಹೋಗು’ ಅಂದಿದ್ರೆ ಓಕೆ. ‘ಎಲ್ಲಿಗೂ ಹೋಗ್ಬೇಡ…ಸುಮ್ನೆ ಮನೇಲೇ ಬಿದ್ದಿರು’ ಅಂದಿದ್ರೂ ಪರವಾಗಿರಲಿಲ್ಲ. ಅದು ಬಿಟ್ಟು ರಥ ಹತ್ರ ಅಲ್ದಿದ್ರೆ ‘ಅದರಾಚೆ’ ಬೇಕಾದ್ರೂ ಹೋಗು ಅಂದಿದ್ದು ನನಗೆ ತಲೆಯೆಲ್ಲಾ ‘ಧಿಂssss’ ಅಂದುಬಿಡ್ತು. ಅದರ ಆಚೆ ಬೇಕಾದ್ರೂ ಹೋಗು ಅಂಥಾ ಯಾಕೆ ಹೇಳಿದ್ದು!?? ಯಾವತ್ತು ಹಾಗೆ ಹೇಳೇ ಇರ್ಲಿಲ್ಲ ಅಮ್ಮ. ಹಾಗಾದ್ರೆ ಅದರ ‘ಆಚೆ ಬದಿ’ ಏನಿರಬಹುದು!!?? ಅದೂ ಅಲ್ದೆ ಸಿಟ್ಟಲ್ಲಿ ಬೇರೆ ಮಲ್ಲಿಕಾರ್ಜುನ ಖರ್ಗೆ ಥರ ಮುಖ ಮಾಡ್ಕೊಂಡು ಹೇಳಿದ್ದಾರೆ. ಎಂತಾ ಕಥೆ ಇದು!? ಯಾಕೆ ಹೀಗೆ!??? ಅಂಥೆಲ್ಲಾ ಯೋಚನೆ ಮಾಡ್ತಾ ಸುಭಾಶು ಇದ್ದಲ್ಲಿಗೆ ಹೋದೆ. ಅವನಿಗೂ ಈ ತತ್ವಜ್ಞಾನಿಕ ಇಕ್ಕಟ್ಟನ್ನು ವಿವರಿಸಿದೆ.

ಅವನೂ ತಲೆ ಕೆರ್ಕೊಂಡ. ಕೈಗೆ ಒಂದಷ್ಟು ಕೂದಲು ಬಂದವೇ ಹೊರತು ಏನೂ ಹೊಳೆಯಲಿಲ್ಲ. ‘ಏ ಹೋಗ್ಲಿ ಬಾರೋ…ಲಗೋರಿ ಆಡೋಣ’ ಅಂಥ ಅಂದ. ಆಟ ಶುರು ಹಚ್ಕೊಂಡ್ವಿ. ಸ್ವಲ್ಪ ಹೊತ್ತಿನಲ್ಲೇ ಮಾಧವರಾಯರ ಮಗ ಸುಮಂತ ಬಂದ. ನಮಗಿಂತಾ ಮೂರು ವರ್ಷ ದೊಡ್ಡವನು. ಅವನಿಗೆ ಖಂಡಿತಾ ಈ ಉಭಯಸಂಕಟದಿಂದ ಪಾರಾಗುವ ಕಲೆ ಗೊತ್ತಿರ್ಬೇಕು ಅಂಥಾ ಅಂದ್ಕೊಂಡು ಅವನಿಗೂ ಕೇಳ್ದೆ. ಆ ಪುಣ್ಯಾತ್ಮ ‘ನಂಗೂ ಗೊತ್ತಿಲ್ಲ ಕಣೋ, ನಂಗೆ ಅಮ್ಮ ಯಾವಾಗ್ದ್ಲೂ ಬೈತಾ ಇರ್ತಾರೆ ಅಲ್ಲಿ ಹೋಗಬಾರದು ಅಂಥಾ ಹೇಳಿದ್ದಾರೆ’ ಅಂದು ಜಾಪಾಳ ಮಾತ್ರೆ ಕೊಟ್ಟ. ಅಯ್ಯೋ ದೇವ್ರೆ ಅಂಥ್ಹಾ ತಲೆ ಚಚ್ಕೊಂಡೆ. ನನಗಂತೂ ಈ ರಥದ ಮನೆಯ ಹಿಂಬಾಗ ಮತ್ತಷ್ಟು ನಿಗೂಡವಾಗಿ ಕಾಣಲು ಶುರುವಾಯ್ತು. ಅಷ್ಟೊತ್ತಿಗೆ ಲಗೋರಿಯ ಪೆಟ್ಟು ಬಿದ್ದದ್ದರಿಂದ ಮನಸ್ಸು ಆಲೋಚನೆಯಿಂದ ಹೊರಬಂದು, ಚೆಂಡು ಹಿಡಿದು ವಾಪಾಸು ಇಕ್ಕಲು ಓಡಿದೆ. ಲಗೋರಿ ಮುಗಿತು, ಕತ್ತಲಾಯ್ತು ಅಂಥಾ ಎಲ್ರೂ ಮನೆಗೆ ಹೋದ್ರೂ ನಂಗೆ ಈ ಮೆದುಳುತುರಿಕೆ ಹೋಗ್ಲೇ ಇಲ್ಲ. ಏನಾದ್ರೂ ಆಗ್ಲಿ, ಇವತ್ತು ಈ ಕೇಸನ್ನ ಸಾಲ್ವ್ ಮಾಡಲೇಬೇಕು ಅಂಥಾ ಅಂದ್ಕೊಂಡು….. ಆ ಬಲಗಡೆಯ ಗೋಡೆ ಮತ್ತು ಆ elevation ಇದ್ದ ಧರೆಯ ಮಧ್ಯೆ ನುಗ್ಗಿದೆ. ಗೋಡೆ ಸುಮಾರು ಹತ್ತಡಿ ಅಗಲವಿತ್ತು. ಆ ಹತ್ತಡಿಯ ನುಸುಳುವಿಕೆಯಲ್ಲಿ ಮೈ-ಕೈಗೆ ಎಷ್ಟೇ ತರಚುಗಾಯವಾಗಿದ್ರೂ ಲೆಕ್ಕಿಸದೆ ‘ನಡೆ ಮುಂದೆ ನಡೆ ಮುಂದೆ ನುಸುಳಿ ನಡೆ ಮುಂದೆ’ ಅಂಥಾ ಹಾಡ್ಕೊಂಡು ಸೋಲೊಪ್ಪದೇ ಮುಂದೆ ಹೋದೆ. ಸುಮಾರು ಎಂಟು-ಹತ್ತು ನಿಮಿಷದ ನಂತರ……ಆ ಗೋಡೆಯ ಕೊನೆ ಮತ್ತು ಧರೆಯ ಮಧ್ಯದಲ್ಲಿ, ಕ್ಷೀಣವಾದ ಬೆಳಕು ತೂರಿ ಬರುತ್ತಿದ್ದ ನನ್ನ ತಲೆ ತೂರುವಷ್ಟು ಜಾಗವಿದ್ದ ಕಿಂಡಿ ತಲುಪಿ…….ನನ್ನೆಲ್ಲಾ ಉತ್ಸುಕತೆಯನ್ನು ಒಟ್ಟುಮಾಡಿ, ಢವಗುಟ್ಟುತ್ತಿದ್ದ ಹೃದಯವನ್ನು ಸುಮ್ಮನಿರಿಸಿ………..ಜಗತ್ತಿನ ಆಚೆ ಬದಿಗೆ ಇಣುಕಿ ನೋಡಿದೆ.
.
.
.
.
.
.
.
.
.
.
.
ಸುಮಾರು ಒಂದು ಅರವತ್ತು ಅಡಿಯಷ್ಟು ಉದ್ದ, ಮೂವತ್ತು ಅಡಿಯಷ್ಟು ಅಗಲದ ಖಾಲಿ ಜಾಗ, ಕೊನೆಯಲ್ಲೊಂದು ಸಣ್ಣ ಧರೆ ಅಲ್ಲಿಂದಾಚೆಗೆ ಸುಂದರ ಪೂಜಾರಿಯವರ ಮನೆಯ ಬೇಲಿ ಇಷ್ಟೇ ಇದ್ದದ್ದು. ಆ ಖಾಲಿಜಾಗದಲ್ಲಿ ನಮ್ಮ ಗದ್ದೆಮನೆಯ ಸುರೇಶನ ಮನೆಯ ನಾಯಿ ‘ಗುಂಡ’ ಮತ್ತು ನನ್ನ ದೋಸ್ತು ಮಂಜುನಾಥನ ಮನೆಯ ನಾಯಿ ‘ಗೊಣ್ಣೆ’ ಎರಡೂ ಆಡ್ತಾ ಇದ್ವು. ಸುಂದರ ಪೂಜಾರಿಯವರ ಮನೆಗೆ ಹೋಗುವಾಗ ಒಂದೆರಡು ಸಲ ಈ ಜಾಗ ನನಗೆ ಕಂಡಿತ್ತಾದರೂ ‘ಅದು ಇದೇ’ ಅಂಥಾ ಗೊತ್ತಾಗುವಷ್ಟು mapping skills ಇನ್ನ್ನೂ ಬೆಳೆದಿರಲಿಲ್ಲ ಅನ್ಸುತ್ತೆ.

ಅವತ್ತು ಗೊತ್ತಾಯ್ತು, ಜಗತ್ತಿನ ತುದಿಯಾಚೆಗೆ ಇರೋದು ‘ಎರಡು ನಾಯಿಗಳು ಮತ್ತು ಸುಂದರ ಪೂಜಾರಿಯವರ ಮನೆ’ ಅಂಥಾ. ಇಷ್ಟು ಸಣ್ಣ ವಿಚಾರ ನಿನಗೆ ಗೊತ್ತಿರ್ಲಿಲ್ವಾ ಅಂಥಾ ಯಾರಾದ್ರೂ ಉಗಿದರೆ ಕಷ್ಟ ಅಂಥಾ ಅಂದ್ಕೊಂಡು, ಯಾರಿಗೂ ಈ ‘ರಥದ ಮನೆಯ ರಹಸ್ಯ’ವನ್ನು ಹೇಳದೆ ಸುಮ್ಮನೇ ನನ್ನಲ್ಲೇ ಇಟ್ಕೊಂಡೆ. ಸುಭಾಶುಗೆ ಮಾತ್ರ ‘ಹಿಂಗಿಂಗೆ ಮಾರಾಯ…’ ಅಂಥಾ ಗುಟ್ಟಲ್ಲಿ ಹೇಳ್ದೆ. ಅವ್ನು ‘ಸುರೇಶನ ಮನೆ ನಾಯಿ ಸತ್ತೋಗಿ ಎರಡು ತಿಂಗಳಾಯ್ತು, ನಿನಗೆಲ್ಲೋ ತಲೆ ಕೆಟ್ಟಿದೆ’ ಅಂಥಾ ಹೇಳಿ ಸೆಟ್ಟಾಟ ಆಡೋಕೆ ಸುಮಾ ಮಮತಾ ಕರೀತಾ ಇದ್ದಾರೆ ಅಂಥಾ ಓಡಿ ಹೋದ.

ಜಗತ್ತಿನ ಆಚೆಯ ದರ್ಶನ ಮಾಡಿ ಎಡ್ಮಂಡ್ ಹಿಲರಿಯಷ್ಟು ಖುಷಿಪಟ್ಟಿದ್ದ ನನಗೆ, ಈ ಸುಭಾಷು “ಈ ಜೀವನದ ಆಚೆ ಏನಿದೆ!?’ ಎನ್ನುವ ಹೊಸಾ ತಲೆಬಿಸಿ ತಂದಿಟ್ಟು ಹೋದ

ಸಾರ್ಕ್ ಮಾತುಕತೆಯಡಿಯಲ್ಲಿ ಚೀನಾಕ್ಕೆ ಬೆವರಿಳಿಸಿದ ಮೋದಿ

e0b2aee0b38be0b2a6e0b2bf

ವ್ಯವಹಾರವಲಯದಲ್ಲಿ ಒಂದು ಪದವಿದೆ “ಫರ್ಸ್ಟ್ ಮೂವರ್ಸ್ ಅಡ್ವಾಂಟೇಜ್” ಎಂದು. ಕನ್ನಡದಲ್ಲಿ ಸಡಿಲವಾಗಿ ‘ಮೊದಲ ನಡೆ ನಡೆಸುವವನಿಗಾಗುವ ಲಾಭ’ ಎಂದು ಅನುವಾದಿಸಬಹುದು. ಅಂದರೆ ಯಾರು ಮೊದಲ ಹೆಜ್ಜೆ ಇಡ್ತಾನೋ ಅವನಿಗೆ ಕೆಲವು ಅನುಕೂಲಗಳು/ಹೆಚ್ಚು ಅವಕಾಶಗಳು ಒದಗಿಬರುತ್ತದೆ. ಚೆಸ್ ಆಟದಲ್ಲಿ ಬಿಳಿಕಾಯಿ ನಡೆಸುವವನಿಗೆ ಮೊದಲ ತಂತ್ರವನ್ನು ಹೂಡಲು ಅವಕಾಶಸಿಗುವುದಿಲ್ಲವೇ? ಹಾಗೆ. ಕಪ್ಪುಕಾಯಿ ನಡೆಸುವವನಿಗೂ ತನ್ನದೇ ಆದ ತಂತ್ರ ಹೂಡುವ ಅವಕಾಶವಿದ್ದರೂ,ಅದು ಬಿಳಿಕಾಯಿಯವನ ನಡೆಗಳ ಮೇಲೆಯೇ ಅವಲಂಬಿತವಾಗುವ ಸಾಧ್ಯತೆಗಳೂ ಹೆಚ್ಚು. ಆ ಆಟಗಾರ ಬಿಳಿಕಾಯಿಗಳ ನಡೆಯನ್ನು ಅನುಸರಿಸುತ್ತಾ, ತನ್ನ ಕಾಯಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತನಾಗುತ್ತಾನೆ. ಹಾಗೆಯೇ ವ್ಯವಹಾರ ಕ್ಷೇತ್ರದಲ್ಲಿ,ಮೊದಲ ನಡೆ ನಡೆಸುವವನಿಗೆ ಬಹಳಷ್ಟು ಅನುಕೂಲಗಳು ಒದಗಿಬರುತ್ತವೆ. ಮೊತ್ತ ಮೊದಲನೆಯದಾಗಿ, ಆತನಿಗೆ ಸ್ಪರ್ದಿಗಳೇ ಇರುವುದಿಲ್ಲ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸುಲಭ ಅವಕಾಶ. ಒಮ್ಮೆ ಪ್ರಾಬಲ್ಯ ಸಾಧಿಸಿದರೆ,ಆತನ ಉತ್ಪನ್ನ ಉತ್ಕೃಷ್ಟಮಟ್ಟದ್ದಾಗಿದ್ದರೆ, ಬೇರೆ ಏನೂ ಮಾಡದೆ ವರ್ಷಾನುಗಟ್ಟಲೇ ಲಾಭವನ್ನು ಆನಂದಿಸಬಹುದು.

ಆದರೆ, ಖಂಡಿತವಾಗಿಯೂ ಲಾಭವಿದ್ದ ಮೇಲೆ ನಷ್ಟವಿದ್ದೇ ಇರುತ್ತದೆ. ಮೊದಲ ನಡೆ ನಡೆಸುವವನಿಗೆ ಅಗಾಧ ಧೈರ್ಯ ಬೇಕಾಗುತ್ತದೆ. ಅ ನಿಯಂತ್ರಿತ ಅಪಾಯ (ರಿಸ್ಕ್) ತೆಗೆದುಕೊಳ್ಳಬೇಕಾಗುತ್ತದೆ. ನಡೆಯಲ್ಲಿ ಸ್ವಲ್ಪವೇ ಎಡವಿದರೂ, ಅಪಾರ ನಷ್ಟಕ್ಕೀಡಾಗುತ್ತಾನೆ. ಇನ್ನೊಮ್ಮೆ ಎದ್ದು ನಿಲ್ಲಲೂ ಸಾಧ್ಯವಾಗದಷ್ಟು ವ್ಯವಹಾರ ಕುಸಿಯಬಹುದು. ನಿಯಂತ್ರಿತ ರಿಸ್ಕ್ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ನಡೆ ನಡೆಸುವವನೇ ಚಾಣಾಕ್ಷ ಮತಿ. ಮೋದಿ ತನ್ನ ಮೊದಲ ನಡೆಯಲ್ಲಿ ಎಷ್ಟೊಂದು ಹಕ್ಕಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ ಎಂದು ಇನ್ನೂ ಅರಿತಿಲ್ಲದವರಿಗಾಗಿ ಇದೊಂದು ಸಣ್ಣಪ್ರಯತ್ನ:

ಭಾರತ ದಕ್ಷಿಣ-ಪೂರ್ವ ಏಷ್ಯಾದಲ್ಲಿ ಭಾರೀ ತೂಕದರಾಷ್ಟ್ರ (regional heavyweight). ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಚೀನಾವನ್ನು ಬದಿಗಿಟ್ಟರೆ ತನ್ನ ಆರ್ಥಿಕ, ವೈಜ್ನಾನಿಕ ಹಾಗೂ ಸೈನಿಕ ಬಲದಿಂದ ಉಳಿದವರನ್ನು ಅಲುಗಿಸಬಲ್ಲದಷ್ಟು ಪ್ರಭಾವಿ. ಭಾರತ ತನ್ನ ಭಾರವನ್ನು ಉಳಿದವರ ಮೇಲೆ ಹೇರಿ ಯಾರನ್ನೂ ಹೆದರಿಸಲು ಪ್ರಯತ್ನಿಸಿಲ್ಲವಷ್ಟೆ. ಅದನ್ನು ಮಾಡಿದಲ್ಲಿ ನೆರೆಯ ರಾಷ್ಟ್ರಗಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದರೆ ಭಾರತದ ಯಾವ ಸರ್ಕಾರವೂ ನೆರೆಯವರನ್ನು ಎಂದೂ ಹೆದರಿಸಿಲ್ಲ ಅಥವಾ ಅಕ್ರಮಣ ಮಾಡಿಲ್ಲ.ಬದಲಿಗೆ ಅದು ಎಲ್ಲರನ್ನೂ ಸ್ನೇಹಿತರೆಂದು ಪರಿಗಣಿಸಿ ಅವರಿಗೆ ಸಹಾಯ ಮಾಡಿದೆ.ಬೇರೆ ದೇಶಗಳು ನಮ್ಮ ಸಹಾಯವನ್ನು ಅದೇ ರೂಪದಲ್ಲಿ ಹಿಂದೆ ಕೊಟ್ಟಿಲ್ಲ, ಅದು ಬೇರೆ ಮಾತು ಬಿಡಿ. ಆದರೆ ಮೋದಿ ತನ್ನೆಲ್ಲಾ ನೆರೆರಾಷ್ಟ್ರಗಳನ್ನು ತನ್ನ ಮೊದಲ ದಿನದ ಕಾರ್ಯಕ್ರಮಕ್ಕೇ ಆಹ್ವಾನಿಸುವ ಮೂಲಕ, ಸ್ನೇಹ ಹಸ್ತವನ್ನು ಚಾಚಿದ್ದಾರೆ. ಮೇಲ್ನೋಟಕ್ಕೆ ಇದು ಬರೀ ಸ್ನೇಹ ಹಸ್ತದಂತೆ ಕಂಡರೂ,ಒಂದು ಮಟ್ಟಕ್ಕೆ ಕೆಳಗಿಳಿದು ನೋಡಿದಾಗ, ಮೋದಿ ಸತ್ತು ಹೋಗಿರುವ ಸಾರ್ಕ್ ಒಕ್ಕೂಟದಲ್ಲಿ ಒಂದು ಸಂಚಲನ ಮೂಡಿಸಿದ್ದಾರೆ ಎಂದು ತಿಳಿಯುತ್ತದೆ. ಅದರೊಂದಿಗೇ ‘ಈ ಏರಿಯಾದಲ್ಲಿ ಬಾಸ್ಯಾರು!?’ ಎಂದು ತೋರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ನಂತರ ನಡೆದ ಹಲವಾರು ಚರ್ಚೆಗಳಲ್ಲಿ,ಅಧ್ಯಕ್ಷರ ಮಾತುಗಳಲ್ಲಿ ಈ ವಿಷಯ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ತಮಿಳರ ವಿರೋಧದ ನಡುವೆಯೂ ಶ್ರೀಲಂಕಾದ ಅಧ್ಯಕ್ಷನನ್ನು,ಹಲವಾರು ಬುದ್ದಿ(ಇರದ)ಜೀವಿಗಳ ಗೊಣಗಾಟದ ನಡುವೆಯೂ ಪಾಕಿಸ್ತಾನವನ್ನು ಆಹ್ವಾನಿಸುವ ಮೂಲಕ ಮೋದಿ ತನ್ನ ವಿದೇಶಾಂಗ ನೀತಿಯ ರೂಪು ರೇಷೆಯನ್ನು ಎತ್ತಿ ತೋರಿಸಿದ್ದಾರೆ.

ಶ್ರೀಲಂಕಾ ಜೊತೆಗಿನ ಭಾಂಧವ್ಯವನ್ನು,ಕೆಲವು ಪ್ರಾದೇಶಿಕ ಪಕ್ಷಗಳು ಹಾಗೂ ನಾಯಕರನ್ನು ಸಂತೋಷಪಡಿಸುವುದಕ್ಕಾಗಿ ಕಡಿದುಕೊಂಡ ಭಾರತ ಸರ್ಕಾರ ಆ ಪ್ರದೇಶದಲ್ಲಿ ಚೀನಾ ಎಷ್ಟರ ಮಟ್ಟಿಗೆ ತನ್ನ ಪ್ರಾಬಲ್ಯ ಸಾಧಿಸಿತೆಂದು ನೋಡಲೂ ಮರೆಯಿತು.ಇದರ ಪರಿಣಾಮವಾಗಿ ಇಂದು ಚೀನಾ,ಲಂಕಾದ ಹಿಡಿತದಲ್ಲಿರುವ ಹಿಂದೂಸಾಗರದಲ್ಲಿ ಬಲಿಷ್ಟ ನೌಕಾ ಹಾಗೂ ವಾಯು ನೆಲೆಗಳನ್ನು ಸ್ಥಾಪಿಸಿದೆ. ಒಂದು ವೇಳೆಯೇನಾದರೂ ಭಾರತ ಮತ್ತು ಚೀನಾದ ನಡುವೆ ಯುದ್ದ ಸಂಭವಿಸಿದರೆ, ನಾವು ಕೇವಲ ಈಶಾನ್ಯದಿಂದ ಮಾತ್ರವಲ್ಲ, ದಕ್ಷಿಣದಿಂದಲೂ ಚೀನಾವನ್ನುಎದುರಿಸಬೇಕಾಗುತ್ತದೆ. ವರ್ಷಕ್ಕೆ 3 ಶತಕೋಟಿ ಡಾಲರ್ ಮೊತ್ತದ ಮುಕ್ತ ವ್ಯಾಪಾರ ಒಪ್ಪಂದಗಳು ಎರಡು ದೇಶದ ನಡುವೆ ಇದೆ. 4 ಶತಕೋಟಿ ಡಾಲರ್ ಮೊತ್ತದಲ್ಲಿ ದೇಶದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು,ವಿಶೇಷ ಆರ್ಥಿಕ ವಲಯವನ್ನು, ದೇಶದ ಮೊದಲ ಚತುಷ್ಪತ ಹೆದ್ದಾರಿಯನ್ನುಚೀನಾ ರಾಜಾರೋಷವಾಗಿ ಕಟ್ಟುತ್ತಿದೆ. ಇವೆಲ್ಲವೇ ಚೀನಾದ ಸುಲಭಸಾಲ (soft loan)ಗಳಿಂದಲೇ ನಡೆಯುತ್ತಿರುವುದು. ಕಣ್ಣು ಮಿಟುಕಿಸುವಷ್ಟರಲ್ಲಿ ಭಾರತ ಹಂಬಂಟೋಟದ ಬಂದರು ಹಾಗೂ ಆರ್ಥಿಕವಲಯ ನಿರ್ಮಾಣದ ಅವಕಾಶವನ್ನು ಕಳೆದುಕೊಂಡಿತು. ಇಂದು ಒಂದು ಶತಕೊಟಿ ಡಾಲರ್ಮೊತ್ತದ ಅದೇ ಗುತ್ತಿಗೆ 85% ಚೀನಾದ ಸಹಾಯ ಧನದ ಮೇಲೆ ನಡೆಯುತ್ತಿದೆ. ನಮ್ಮಿಂದ ಕೇವಲ ಒಂದು ಘಂಟೆಯ ಪ್ರಯಾಣ ದೂರದಲ್ಲಿರುವ ಲಂಕಾದ ದ್ವೀಪದ ಮೇಲೆ ಅದೆಷ್ಟೋ ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚೀನಾ ಹಿಡಿತ ಸಾಧಿಸಿದೆ. ಹಿಂದೂ ಚೀನಾ ಭಾಯಿ-ಭಾಯಿಮರೆತು, ಲಂಕಾ ಚೀನಾ ಭಾಯಿ-ಭಾಯಿ ಆಗಿ ಹೋಗಿದೆ. ಇದನ್ನು ಕಾಲ ಸಂಪೂರ್ಣವಾಗಿ ಮೀರಿ ಹೋಗುವ ಮುನ್ನಸರಿ ಪಡಿಸಬೇಕೆಂದು ಮೋದಿ ಅರಿತಿದ್ದಾರೆ. ತನ್ನದೇ ಎನ್.ಡಿ.ಎಯ ವೈಕೋ ಹಾಗೂ ಭಾರತದ ಪ್ರಭಾವಿ ಮುಖ್ಯಮಂತ್ರಿಯಾದ ಜಯಲಲಿತಾರವರ ಬ್ಲಾಕ್ಮೈಲ್ ಅಥವಾ ವಿರೋಧಕ್ಕೆ ಕಿವಿಗೊಡದೇ ಮೋದಿ ತನ್ನ ನಡೆಯನ್ನು ನಡೆಸಿದ್ದಾರೆ.

ಯುದ್ದಾ ನಂತರದ ಅಫ್ಘಾನಿಸ್ತಾನ ನಮಗೆ ಬಹಳ ದೊಡ್ಡ ಆರ್ಥಿಕ ಅವಕಾಶವೂ ಹೌದು, ಹಾಗೆಯೇ ಮತ್ತೆನಿಧಾನವಾಗಿ ಚಿಗುರುತ್ತಿರುವ ಅಲ್-ಕೈದಾ ಬೆದರಿಕೆಯೂ ಹೌದು. ಅಮೇರಿಕಾವೇನೋ ಒಸಾಮನನ್ನು ಕೊಂದು ದೇಶವನ್ನು ತೊರೆಯುತ್ತಿದೆ. ಆದರೆ ಅಲ್-ಕೈದಾಇನ್ನೂಸತ್ತಿಲ್ಲ. ಮೋದಿಗೆದ್ದಒಂದುವಾರದಲ್ಲೇಭಾರತ ದದೂತಾವಸವನ್ನುಸ್ಪೋಟಿಸುವಮೂಲಕತನ್ನಇರುವಿಕೆಯನ್ನುಪ್ರಚುರಪಡಿಸಿದೆ. ಹಾಗೆಂದು ಅಪ್ಘಾನಿಸ್ಥಾದ ಜೊತೆ ನಾವು ಸಂಬಂದ ಕಡಿಯುವಂತೆಯೂ ಇಲ್ಲ. ಭಾರತ ಉದ್ಯಮಿಗಳುಅಲ್ಲಿರಸ್ತೆ, ಆಸ್ಪತ್ರೆ, ಮನೆಗಳನಿರ್ಮಾಣಕ್ಕಾಗಿಕೋಟಿಗಟ್ಟಲೆಡಾಲರ್ಗಳಗುತ್ತಿಗೆಗಳನ್ನುಗೆದ್ದಿದ್ದಾರೆ. ಆಫ್ಘಾನಿಸ್ತಾನಕ್ಕೆಸಮುದ್ರವ್ಯಾಪಾರಗಳಿಗೆಅನುಕೂಲವಾಗುವಂತೆ, ಇರಾನ್ಮೂಲಕ, 218ಕಿ.ಮೀಉದ್ದದಹೆದ್ದಾರಿಯನ್ನುಪೂರ್ಣಗೊಳಿಸಿಕೊಟ್ಟಿದ್ದೇಭಾರತ . ಭಾರತ ೀಯಚಲನಚಿತ್ರಗಳಿಗೆಅಫ್ಘಾನಿಸ್ತಾನ ನಿರ್ಲಕ್ಷಿಸಲಾಗದಮಾರುಕಟ್ಟೆ. ಇರಾನ್ಪೈಪ್-ಲೈನ್ಒಪ್ಪಂದಸಾಧ್ಯವಾದರೆ, ಅದು ಹಾದು ಬರುವುದು ಅಪ್ಘಾನಿಸ್ತಾನಿನ ಮೂಲಕವೇ. ಭಾರತ ದಮಧ್ಯಏಷ್ಹ್ಯಾವ್ಯವಹಾರಕ್ಕೆಹೆಬ್ಬಾಗಿಲುಈದೇಶ. ಕಂದಹಾರಿನಲ್ಲಿರುವಭಾರತ ದಪುಟ್ಟಮಿಲಿಟರಿನೆಲೆಯನ್ನುಬಲಪಡಿಸುವಮಾತುಕತೆಗಲುನಡೆದಿವೆ. ಭಾರತದ ಶಾಂತಿಪಡೆಗಳು ಅಲ್ಲಿ ಹೇಗಿದ್ದರೂ ಇವೆ. ಪಾಕಿಸ್ಥಾನವನ್ನುಹದ್ದುಬಸ್ತಿನಲ್ಲಿಡಲುಅಲ್ಲಿಭಾರತ ದಇರುವಿಕೆಅವಶ್ಯಕೂಡಾ. ಯುದ್ದಕಾಲದಲ್ಲಿಅಫ್ಘಾನಿಸ್ತಾನ ದಲ್ಲಿನವಾಯುನೆಲೆಗಳುಸಹಾಯಕ್ಕೆಬರಲಿವೆ. ಪಾಕಿಸ್ತಾನಕ್ಕೆ ತಲೆನೋವು ಉಂಟುಮಾಡಲು ಪಷ್ತೂನಿ ದಂಗೆಕೋರರನ್ನು ಬೆಳೆಸಿದ್ದೇ ಭಾರತ . ದೇಶದವಿಷಯಗಳಲ್ಲಿಅಮೇರಿಕಾದಬೆಂಬಲದೊಂದಿಗೆಪಾಕಿಸ್ತಾನ ನಡೆಸುತ್ತಿರುವ ಹಸ್ತಕ್ಷೇಪವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿರುವ ಹಮೀದ್ಕರ್ಝಾಯಿಗೆ  ಅಲ್ಲಿ ಸರ್ಕಾರ ನಡೆಸಲು ಮೋದಿಯ ಸಹಕಾರದ ದೊಡ್ಡ ಅಗತ್ಯವಿದೆ. ಆದ್ದರಿಂದಲೇಮೋದಿಯಕರೆಬಂದೊಡನೆ, ಅಫ್ಘಾನಿಸ್ತಾನ ದಲ್ಲಿಅಮೇರಿಕಾಅಧ್ಯಕ್ಷಬಂದಿಳಿದಿದ್ದರೂಅವನನ್ನುಭೇಟಿಯಾಗದೆಕರ್ಝಾಯಿಓಡೋಡಿಬಂದದ್ದು.

ಇನ್ನು ಪಾಕಿಸ್ತಾನದ ವಿಷಯಕ್ಕೆ ಬಂದರೆ, ಮೋದಿಯ ಆಹ್ವಾನ ಅನೂಹ್ಯ ರೀತಿಯಲ್ಲಿ ಕೆಲಸ ಮಾಡಿದೆ.ಚುನಾವಣಾ ಭಾಷಣಗಳಲ್ಲಿ ಪಾಕಿಸ್ತಾನದ ವಿರುದ್ದ ಹರಿಹಾಯ್ದಿದ್ದ ಮೋದಿ, 26/11ರ ಪಾಪಿಗಳಿಗೆ ಮತ್ತು ದಾವೂದನಂತ ಅಪರಾಧಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ಥಾನದ ನಿಲುವಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಮೋದಿ, ತನ್ನ ಕೈಗೆ ಅಧಿಕಾರ ಬಂದೊಡನೆ ಪಾಕಿಸ್ತಾನಕ್ಕೆ ನೇರವಾಗಿ ಬೆದರಿಕೆ ಹಾಕಬಹುದೆಂಬ ಎಲ್ಲಾ ವಿಶ್ಲೇಷಣೆಗಳಿಗೆ ವಿರುದ್ದವಾಗಿ ಸ್ನೇಹಹಸ್ತ ಚಾಚಿ, ಪಾಕ್ ಅಧ್ಯಕ್ಷನನ್ನು ಬರಮಾಡಿಕೊಂಡರು. ಯಾಕೆಂದರೆ ಮೋದಿಗೆ ಗೊತ್ತು, ಶಾಂತಿಯ ಪ್ರಯತ್ನ ಮಾಡದೇ ನೇರ ಚಕಮಕಿಗಿಳಿದರೆ ವಿಶ್ವಮಟ್ಟದಲ್ಲಿ ಪಾಕಿಸ್ತಾನಕ್ಕೆಅನುಕಂಪದ ಬೆಂಬಲ ದೊರೆಯಲಿದೆಯೆಂದು. ಅವಕಾಶವಾದಿ ಅಮೇರಿಕಾ ನಾಳೆ ‘ಭಾರತ ಶಾಂತಿಯ ಪ್ರಯತ್ನವನ್ನೇ ನಡೆಸದೆ ಆಕ್ರಮಣಕಾರಿ ನೀತಿಯನ್ನನುಸರಿಸುತ್ತಿರುವುದು ತಪ್ಪು’ ಎಂಬ ಹೇಳಿಕೆ ನೀಡಿ ಅರ್ಥಿಕವಾಗಿ ನಮ್ಮನ್ನು ಹಿಂದೆದೂಡಲು ಪ್ರಯತ್ನಿಸಬಹುದು. ಆದೂ ಅಲ್ಲದೆ ಮೋದಿ, ಪಾಕಿಗಳು ಶಾಂತಿ ಮಾತುಕತೆಯ ಅಹ್ವಾನ ನೀಡುವ ಮೊದಲೇ ತಾನೇ ಮೊದಲ ನಡೆನಡೆಸಿ ನೆರೆಯದೇಶವನ್ನು ಪೇಚಿಗೆ ಸಿಲುಕಿಸಿದ್ದಾರೆ. ಈ ಪೇಚಿನ ಕಾರಣಕ್ಕಾಗಿಯೇ ನವಾಜ್ಷರೀಫ್ ಅಹ್ವಾನಕ್ಕೆ ಉತ್ತರಿಸಲು ಎರಡು ದಿನಗಳಷ್ಟು ಕಾಲತಲೆಕೆಡಿಸಿಕೊಂಡದ್ದು.

ಮುಚ್ಚಿದ ಬಾಗಿಲ ಹಿಂದೆ ಇಬ್ಬರ ನಡುವೆ ಏನು ಮಾತುಕತೆ ನಡೆಯಿತೆಂದು ನನಗೆ ನಿಮಗೆ ಎಂದಿಗೂ ತಿಳಿಯುವುದಿಲ್ಲ. ಮೋದಿ ನೇರವಾಗಿಯೇ ಖಾರವಾದ ಮಾತುಗಳಿಂದ ಖಂಡಿಸಿರಬಹುದು. ಅಥವಾ ಸದಾ ಸೇನೆಯ ಒತ್ತಿಯಾಳಾಗಿರುವ ಪಾಕಿಸ್ತಾನದ ಅಧ್ಯಕ್ಷ ತಾನಾಗಿಯೇ ಮೋದಿಯೊಂದಿಗೆ ಶಾಂತಿ ಮಾತುಕತೆಗೆ ಮೊದಲ ಚರಣಹಾಡಿರಬಹುದು. ನೆನಪಿರಲಿ, ಇದೇ ನವಾಜ್ ಷರೀಫ್  ಹದಿನೈದು ವರ್ಷಗಳ ಹಿಂದೆ ಪರ್ವೇಝ್ ಮುಶ್ರಫ್ ನೇತೃತ್ವದಲ್ಲಿ ಸೇನೆಯ ವಿಪ್ಲವಕ್ಕೊಳಗಾಗಿ ಅಧಿಕಾರದಿಂದ ಹೊರಹಾಕಲ್ಪಟ್ಟವರು. ಪೂರ್ವದಲ್ಲಿ ಮುಹಾಜಿರಿಗಳು ಹಾಗೂ ಪಶ್ಛಿಮದಲ್ಲಿ ಭಾರತ ಪ್ರಾಯೋಜಿತ ಪುಷ್ತೂನಿ ಮತ್ತು ಬಲೂಚಿಗಳ ದಂಗೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆಉಸಿರಾಡುವ ಅಗತ್ಯವಿದೆ. ಆದ್ದರಿಂದ ರಾಜತಾಂತ್ರಿಕ ಶಾಂತಿ ಮಾತುಕತೆಯ ಅಗತ್ಯತೆ ನಮ್ಮಷ್ಟೇ ಪಾಕಿಸ್ಥಾನ ಅಧ್ಯಕ್ಷರಿಗೂ ಇದೆ.ತನ್ನ ಜನರಿಂದ ಶಾಂತಿದೂತನೆಂದು ಕರೆಯಿಸಿಕೊಂಡು, ಅವರಿಂದ ಮತ್ತೊಮ್ಮೆ ಆಯ್ಕೆಗೊಂಡು ಬಲಿಷ್ಟ ಸರ್ಕಾರ ರಚಿಸಿ ಸೇನೆಯನ್ನು ಸಂಪೂರ್ಣ ಹಿಡಿತಕ್ಕೆ ತರುವುದು ಅವರ ಆದ್ಯತೆ.ಆ ಕಾರಣಕ್ಕಾಗಿ ಅವರು ಮೋದಿಯೊಂದಿಗಾದರೂ, ಮನಮೋಹನನೊಂದಿಗಾದರೂ ಮಾತುಕತೆಗೆ ಸರಿ.

ಇಷ್ಟಲ್ಲದೆ, ಪಾಕಿಸ್ತಾನ ಮತ್ತು ಚೀನಾ ಬಹಳ ಹಳೆಯ ಸ್ನೇಹಿತರು. ಪಾಕಿಸ್ತಾನಕ್ಕೆ ಪರಮಾಣು ತಂತ್ರಜ್ಞಾನ ಕೊಟ್ಟಿದ್ದೇ ಚೀನಾ. ಹಾಗಾಗಿ, ಯುದ್ದಕಾಲದಲ್ಲಿ ಚೀನಾ ಉತ್ತರ ಹಾಗೂ ವಾಯುವ್ಯದಿಂದಲೂ ನಮ್ಮನ್ನು ಮುತ್ತಲಿದೆ. ಪ್ರಾದೇಶಿಕ ರಾಜಕಾರಣ ಸಮೀಕರಣದಲ್ಲಿ ಚೀನಾವನ್ನು ದುರ್ಬಲಗೊಳಿಸಲು ಪಾಕಿಸ್ತಾನಕ್ಕಿಂತಾ ಒಳ್ಳೆಯ ಸ್ನೇಹಿತ ಇನ್ನೊಬ್ಬ ನಮಗೆ ಸಿಗಲಿಕ್ಕಿಲ್ಲ. ಶಾಂತಿ ಹಾಗೂ ಆರ್ಥಿಕ ಒಪ್ಪಂದಗಳಿಂದ ಪಾಕಿಸ್ತಾನವನ್ನು ಓಲೈಸಿಕೊಳ್ಳುವುದರ ಮೂಲಕ ಪಾಕಿಸ್ತಾನವನ್ನು ಚೀನಾದ ತೆಕ್ಕೆಯಿಂದ ಹೊರತರುವುದು ಭಾರತದ ದೂರಾಲೋಚನೆಯ ಪಟ್ಟಿಯಲ್ಲಿ ಇರಲೇ ಬೇಕು.

ಮಾರಿಷಸ್ಸ್ ಹಾಗೂ ಮಾಲ್ಡೀವ್ಸ್ ಸಣ್ಣ ರಾಷ್ಟ್ರಗಳಾದರೂ ಸಹ, ಭಾರತಕ್ಕೆ ಸದಾ ವಿಧೇಯವಾಗಿದ್ದ ದೇಶಗಳು. ಬಹಳಷ್ಟು ಸಮಯ ಭಾರತ ಈ ದೇಶಗಳಿಗೆ ಸಹಾಯ ಮಾಡಿದೆ. ಮಾರಿಷಸ್ಸಿನಲ್ಲಿ ಬೆಳೆಯುತ್ತಿರುವ ಹವಾಲ ಹಾಗೂ ಕಪ್ಪು ಹಣದ ದಂದೆಯನ್ನು ತಹಬಂದಿಗೆ ತರುವುದು ಮೋದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. 2-ಜಿ ಹಗರಣದಲ್ಲಿ ಹೊರಬಿದ್ದ ಪ್ರತಿಯೊಂದು ಸತ್ಯವೂ ಮಾರಿಷಸ್ಸಿನೆಡೆಗೆ ಮುಖಮಾಡಿನಿಂತದ್ದು ನಮ್ಮ ಮುಂದಿದೆ. ಸಧ್ಯಕ್ಕೆ ಸ್ವಿಸ್ ಬ್ಯಾಂಕುಗಳಮೇಲೆ ಕಣ್ಣಿಟ್ಟಿರುವ ಮೋದಿಯ ಮುಂದಿನ ನಡೆ ಮಾರಿಷಸ್ಸ್ ಹಾಗೂ ಮಾಲ್ಡೀವ್ಸ್ ಮೇಲೆ ಇರಲಿದೆ. ಇಷ್ಟೇ ಅಲ್ಲದೆ, ನಾವು ಶ್ರೀಲಂಕಾದ ರೀತಿಯಲ್ಲಿ ಮಾಲ್ಡೀವ್ಸ್ ಅನ್ನೂಸಹ ವರ್ಷಗಳ ಹಿಂದೆಯೇ ರಾಜತಾಂತ್ರಿಕವಾಗಿ ಚೀನಾಕ್ಕೆ ಕಳೆದುಕೊಂಡಿದ್ದೇವೆ. 2012ರಲ್ಲಿ ಚೀನಾದ ದೂತವಾಸ ಪ್ರಾರಂಭವಾದ ಒಂದೇ ತಿಂಗಳಲ್ಲಿ ಮಾಲ್ಡೀವ್ಸ್ ಚೀನಾದಿಂದ 500 ಮಿಲಿಯನ್ ಡಾಲರಿನಷ್ಟು ಆರ್ಥಿಕ ಸಹಾಯ ಪಡೆಯಿತು.ಇದಾದ ಆರೇ ತಿಂಗಳಲ್ಲಿ ಭಾರತೀಯ ಕಂಪನಿ ಜಿ.ಎಮ್.ಆರ್ ಮಾಲ್ಡೀವ್ಸಿನಲ್ಲಿ ಗೆದ್ದಿದ್ದ ಏರ್-ಪೋರ್ಟ್ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿತು. ಕಾಕತಾಳೀಯವೆಂದರೆ ಇದಕ್ಕೆ ಒಂದು ತಿಂಗಳ ಮುಂಚೆಯಷ್ಟೇ ಚೀನಾದ ರಕ್ಷಣಾ ಮಂತ್ರಿ ಮಾಲ್ಡೀವ್ಸಿಗೆ ಭೇಟಿ ನೀಡಿದ್ದರು ಹಾಗೂ ಮಾಲ್ಡೀವ್ಸಿನ ರಕ್ಷಣಾ ಹಾಗೂ ಸಾರಿಗೆ ಸಚಿವ ಆಗಷ್ಟೇ ಬೀಜಿಂಗಿನ ಪ್ರವಾಸ ಮುಗಿಸಿ ಬಂದಿದ್ದರು!!

ಇವನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡೇ ಮೋದಿ ಎಲ್ಲಾ ನಾಯಕರನ್ನು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಮೊದಲದಿನವೇ ಕೆಲಸಕ್ಕೆ ತೊಡಗಿದ ಮೋದಿ, ಎಲ್ಲಾ ನಾಯಕರೊಂದಿಗೆ ಮಾತುಕತೆ ಪ್ರಾರಂಭಿಸುವ ಮೂಲಕ ಅತೀಮುಖ್ಯ ಅಂತರರಾಷ್ಟ್ರೀಯ ಸವಾಲುಗಳಿಗೆ ಕೀಲಿ ಕೊಟ್ಟಿದ್ದಾರೆ. ತನ್ನೆಲ್ಲಾ ವಿದೇಶಾಂಗ ಕಾರ್ಯದರ್ಶಿಗಳಿಗೆ ಮುಂದಿನ ಎರಡು ವರ್ಷಕ್ಕಾಗುವಷ್ಟು ಕೆಲಸವನ್ನು ಮೋದಿ ತನ್ನ ಒಂದೆರಡು ಘಂಟೆಗಳ ಕಾಲದ ಭೇಟಿಯಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಇಷ್ಟೆಲ್ಲದರ ಮಧ್ಯೆ ನಮ್ಮ ಸುಪ್ತ ವೈರಿಯಾದ ಚೀನಾಕ್ಕೆ ಕಂಪನದ ಸಂದೇಶಗಳನ್ನು ಕಳುಹಿಸಿದ್ದಾರೆ. ಬೇರೇನಲ್ಲದಿದ್ದರೂ, ಯುಪಿಎ-2ರ ಸಮಯದಲ್ಲಾದ ವಿದೇಶಾಂಗ ನೀತಿಯ ಪಾರ್ಶ್ವವಾಯುವನ್ನು ಮುಂದುವರೆಸುವುದಿಲ್ಲವೆಂಬ ಸೂಚನೆಯನ್ನು ಹೊರಹಾಕಿದ್ದಾರೆ.

ಇವೆಲ್ಲದರ ನಡುವೆ ಯಾರೂ ಗಮನಿಸದ ಇನ್ನೊಂದು ವಿಷಯವೆಂದರೆ ನಿವೃತ್ತ ಜನರಲ್ ವಿ.ಕೆ.ಸಿಂಗ್ ಅವರಿಗೆ ಎರಡು ವಿಚಿತ್ರ ಖಾತೆಗಳ ಮಿಶ್ರಣವನ್ನು ಕೊಟ್ಟಿರುವುದು. ಸಿಂಗ್ ಅವರು ಈಶಾನ್ಯ ಪ್ರದೇಶದ ಸ್ವತಂತ್ರ ರಾಜ್ಯಮಂತ್ರಿ ಹಾಗೂ ಸುಶ್ಮಾ ಸ್ವರಾಜ್ ಅವರ ಕೈಕೆಳಗೆ ವಿದೇಶಾಂಗ ರಾಜ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ. ಅರುಣಾಚಲಪ್ರದೇಶವನ್ನು ಭಾರತದ ಭಾಗವೆಂದು ಒಪ್ಪಿಕೊಳ್ಳದ, ಅಲ್ಲಿ ಮಿಲಿಟರಿ ದರ್ಜೆಯ ರಸ್ತೆಗಳನ್ನು ನಿರ್ಮಿಸಿ ಟ್ಯಾಂಕರ್ ಹಾಗೂ ಸೇನೆಯನ್ನು ಸುಲಭವಾಗಿ ಹಾಗೂ ಅತಿವೇಗವಾಗಿ ಸಜ್ಜುಗೊಳಿಸುವ ಇರಾದೆಯಿದ್ದ ಚೀನಾಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಂತಹ ಸೂಕ್ಷ್ಮ ಪ್ರದೇಶಕ್ಕೆ ಓರ್ವ ಸೇನಾ ಅಧಿಕಾರಿಯನ್ನು ನಿಯೋಜಿಸುವ ಮೂಲಕ, ಜೊತೆಗೆ ಸಿಂಗ್ ಅವರಿಗೆ ವಿದೇಶಾಂಗ ಖಾತೆ ನೀಡುವ ಮೂಲಕ ಒಬ್ಬ ಬದ್ದ ಸೈನಿಕನನ್ನು ಮಾತುಕತೆಯ ಹೆಬ್ಬಾಗಿಲಾಗಿ ಮಾಡಿದ್ದಾರೆ ಹಾಗೂ ಚೀನಾಕ್ಕೆ ಚೀನಾಕ್ಕೆ ಒಂದು ಬಲಿಷ್ಟ ತಡೆಗೋಡೆಯನ್ನು ಮೋದಿ ಒಡ್ಡಿದ್ದಾರೆ. ಇನ್ನು ಚೀನಾ ಈಶಾನ್ಯದಲ್ಲಿ ಯಾವುದೇ ಸೇನಾ ಚಲನವಲನಗಳನ್ನು ಮಾಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗಲಿದೆ. ಚೀನಾದ ತಂತ್ರ ‘ಭಾರತವನ್ನು ಎಷ್ಟರಮಟ್ಟಿಗೆ ತುಳಿಯಬಹುದು?’ ಎಂದು ನೋಡುವುದಾಗಿತ್ತು. ನಮ್ಮ ಹಳೆಯ ಸರ್ಕಾರಗಳು ಮತ್ತದರ ಸವಕಲು ಮಂತ್ರಿಮಂಡಲ ‘ನಮ್ಮನ್ನು ನೀವು ಎಷ್ಟು ಬೇಕಾದರೂ ತುಳಿಯಬಹುದು’ ಎಂಬ ಸಂದೇಶವನ್ನು ರವಾನಿಸಿದ್ದವು. ಆದರೆ ಈಗ ಬರೀ ಒಂದು ಪಟ್ಟಿನಿಂದ ಎಲ್ಲವೂ ಬದಲಾಗಿದೆ.

ನಮ್ಮ ಸುತ್ತಮುತ್ತಲಿನ ಅವಕಾಶಗಳನ್ನು ಕಸಿದುಕೊಳ್ಳುವ ಕಾಲ ಇನ್ನು ಮುಗಿದಿದೆ. ನಾವಿನ್ನು ಸುಮ್ಮನೆ ಕೂರುವುದಿಲ್ಲ ಮಾತ್ರವಲ್ಲ, ನೀವು ನಮ್ಮಿಂದ ಕಸಿದುಕೊಂಡ ಕೆಲವು ಅವಕಾಶಗಳನ್ನು ಹಿಂತಿರುಗಿ ಪಡೆಯಲು ನಾವು ಸಜ್ಜು. ಮತ್ತು, ಎಷ್ಟೇ ತುಳಿದರೂ ತುಳಿಸಿಕೊಳ್ಳುವ ಸಮಯವೀಗ ಮುಗಿದಿದೆಯೆಂಬ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ. ಎಷ್ಟು ಮಂದಿ ಭಾರತೀಯರಿಗೆ ಇದು ಅರ್ಥವಾಗಿದೆಯೋ ಇಲ್ಲವೋ, ಬೀಜಿಂಗ್ ಮತ್ತು ವಾಷಿಂಗ್ಟನ್ನಿನ ಚತುರಮತಿಗಳಿಗೆ ಇದು ಅರ್ಥವಾಗಿರಬೇಕೆಂದು ನನ್ನ ಅನಿಸಿಕೆ. ಯಾವುದೇ ಪಕ್ಷಪಾತವಿಲ್ಲದೆ ಹೊರಗಿನಿಂದ ಇವೆಲ್ಲ ನೋಡುವ ಅವಕಾಶವಿರುವ ನನಗೆ ಇವೆಲ್ಲಾ ತುಂಬಾ ರೋಚಕ ಆಟದ ಹಂತದಲ್ಲಿ ಕಂಡುಬರುತ್ತಿದೆ. ನಿಜವಾಗಿಯೂ ‘ಅಚ್ಚೇ ದಿನ್ ಆನೇವಾಲೇ ಹೈಂ’

ಪ್ರೀತಿ ಅಕಾರಣವಾಗಿರಬೇಕು…..ದ್ವೇಷ ಸಕಾರಣವಾಗಿರಬೇಕು

“ಪ್ರೀತಿ ಅಕಾರಣವಾಗಿರಬೇಕು,
ದ್ವೇಷ ಸಕಾರಣವಾಗಿರಬೇಕು”

ಆದರೆ ಮೋದಿಯ ವಿಷಯಕ್ಕೆ ಬಂದರೆ ಇದು ಉಲ್ಟಾ. ಮೋದಿಯ ವಿರುದ್ದ ಅರಚುತ್ತಿರುವ ಬು.ಜೀ ಗಳನ್ನು ಕೇಳಿ ನೋಡಿ ‘ನೀವ್ಯಾಕೆ ಮೋದಿಯನ್ನು ದ್ವೇಷಿಸುತ್ತೀರಿ!?’ ಎಂದು. ನೂರರಲ್ಲಿ ಎರಡು ಜನ ಏನಾದರೂ ಒಪ್ಪುವಂತಹ ಕಾರಣ ಕೊಟ್ಟಾರು. ಉಳಿದವರದ್ದೆಲ್ಲಾ ಬರೀ 2002ರ ಒಣವಾದಗಳಷ್ಟೇ.

ಚುನಾವಣಾ ಪಲಿತಾಂಶ ಬಂದು ಇಂದಿಗೆ ಮೂರು ದಿನವಾಯ್ತು. ಕಳೆದ ಇಷ್ಟೂ ವರ್ಷಗಳಿಂದ ಬಿಳಿ ಚರ್ಮದ ಅಮ್ಮ ಮಾಡಿದ್ದೆಲ್ಲವನ್ನೂ ಪ್ರಸಾದವೆನ್ನುವಂತೆ ಸ್ವೀಕರಿಸಿದ ಸೋ ಕಾಲ್ಡ್ ಬುದ್ದಿ ಜೀವಿಗಳು, ಅವಳನ್ನು ಪ್ರಶ್ನಿಸುವ ಒಂದಿಂಚು ಸಾಹಸವನ್ನೂ ತೋರಿಸದ ಬುದ್ದಿಜೀವಿಗಳು, ಮೋದಿ ಗೆದ್ದ ಮರುಕ್ಷಣದಿಂದಲೇ ‘ಅವನೇನು ಮಾಡಬೇಕು? ಅವನ ಸಚಿವಗಣದಲ್ಲಿ ಯಾರ್ಯಾರಿರಬೇಕು? ಪಂಚವಾರ್ಷಿಕ ಯೋಜನೆಯ ಬಜೆಟ್ಟು ಎಷ್ಟಿರಬೇಕು? ಯಾವ ದಿಕ್ಕಿಗೆ ಕುಳಿತು ಆತ ಯಾವ ಗಲ್ಲದ ಮೇಲೆ ಕೈಯಿಟ್ಟು ಯೋಚಿಸಬೇಕು?’ ಎಲ್ಲವನ್ನೂ ಬರೆಯಲಾರಂಬಿಸಿದ್ದಾರೆ!! ಮೂರು ದಿನದಲ್ಲಿ 45ಕ್ಕೂ ಹೆಚ್ಚು ಲೇಖನಗಳನ್ನು ಓದಿ ಮುಗಿಸಿದ್ದೇನೆ. ಒಬ್ಬ ಪುಣ್ಯಾತ್ಮನಂತೂ “ಮೋದಿಯ ಪ್ರಧಾನಿ ಕುರ್ಚಿಯ ಆಶಯ ಈಡೇರಿದೆ, ಹಾಗಾಗಿ ಆತ ಈಗ ಜಶೋದಾಬೆನ್ ಅವರನ್ನು ಮರುಮದುವೆಯಾಗಬೇಕು” ಎನ್ನುವಷ್ಟರಮಟ್ಟಿಗೆ ರಕ್ತ ಕಾರಿಕೊಂಡ.

ಪ್ರಧಾನಿಯಾದವನು ಇಷ್ಟೆಲ್ಲಾ ಮಾಡಬೇಕೆಂಬ ಅರಿವಿದ್ದವರು ಇಷ್ಟು ದಿನ ಪ್ರಧಾನಿ ಕಚೇರಿಯಲ್ಲಿ ಮೌನರಾಗದ ಆಲಾಪ ನಡೆಯುತ್ತಿದ್ದಾಗ ಕಣ್ಣಮೇಲೇನು ಇಟಾಲಿಯನ್ ಪಿಜ್ಜಾ ಹರಡಿಟ್ಟುಕೊಂಡಿದ್ದರೇ? ಅಥವಾ ಕಿವಿಯಲ್ಲಿ ಗಾರ್ಲಿಕ್ ಬ್ರೆಡ್ಡಿನ ತುಣುಕು ಸೇರಿಕೊಂಡಿತ್ತೇ!? ಮಂತ್ರಿವರ್ಯರೆಲ್ಲಾ ಸೋನಿಯಾ ನೇತೃತ್ವದಲ್ಲಿ ದೇಶವನ್ನು ಬಟ್ಟೆ ಒಗೆದಂತೆ ಎತ್ತೆತ್ತಿ ಕುಕ್ಕಿದಾಗ ಇವರೆಲ್ಲಾ ವೆನಿಸ್ಸಿನ ದೋಣಿವಿಹಾರದಲ್ಲಿ ಕಳೆದು ಹೋಗಿದ್ದರೇ? ‘ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಧೈರ್ಯ ಮೂಡಿಸಲು ಮೋದಿ ಏನೇನು ಮಾಡಬೇಕು?’ ಎಂದು ಈಗ ಉಪದೇಶ ಮಾಡುತ್ತಿರುವ ಇವರು, ಮುಜಪ್ಪರ್ ನಗರದಲ್ಲಿ ಜನ ಸತ್ತಾಗ, ಅಖಿಲೇಶನ ಮನೆಯಲ್ಲಿ ಕುಳಿತು ಮುಜ್ರಾ ನೋಡುತ್ತಾ ಕುಳಿತ್ತಿದ್ದರೇ? ಕುರಾನಿನ ಪ್ರಕಾರ ಎಲ್ಲರೂ ಒಂದೇ ಎಂದಮೇಲೆ, ಅದು ಹೇಗೆ ಮೋದಿಯ ಅಧಿಕಾರವಧಿಯಲ್ಲಿ ಕಳೆದ ಅಲ್ಪಸಂಖ್ಯಾತನ ಪ್ರಾಣದ ಬೆಲೆ, ಅಖಿಲೇಶನ/ಅಥವಾ ಸಿದ್ದರಾಮಯ್ಯನ ಅಧಿಕಾರವಧಿಯಲ್ಲಿ ಹೋದ ಅಲ್ಪಸಂಖ್ಯಾತನ ಪ್ರಾಣಕ್ಕಿಂತ ಹೆಚ್ಚಾಗುತ್ತದೆ!? ಮೋದಿ ನರಹಂತಕ ಎಂದು ಅರಚುವ ಗುಳ್ಳೆನರಿಗಳಿಗೆ, ಒಂದುವೇಳೆ ಮೋದಿಯ ಮೇಲಿರುವ ಎಲ್ಲಾ ಪ್ರಕರಣಗಳು ಸಾಬೀತಾದರೂ ಸಹ ಆತನ ಕೈಗಳಿಗಿಂತ ಹೆಚ್ಚಿನ ರಕ್ತ, ಸರಿಸುಮಾರು ಆರು ದಶಕಗಳ ಕಾಲ ದೇಶವನ್ನು ಬಡದೇಶವಾಗಿಯೇ ಇರಿಸಿದ ಆ ಪಕ್ಷ ಹಾಗೂ ಆ ಕುಟುಂಬದ ಕೈಗೆ ಅಂಟಿದೆ ಎಂಬ ಕನಿಷ್ಟ ಅರಿವಾದರೂ ಇದೆಯೇ?

ತಮ್ಮ ಅಭ್ಯರ್ಥಿಗಳು/ಪಕ್ಷಗಳು ಗೆಲ್ಲಲಿಲ್ಲವೆಂಬ ಕಾರಣಕ್ಕೆ ‘ನಮ್ಮ ಚುನಾವಣಾ ವಿಧಾನವೇ ಸರಿಯೆಲ್ಲ’ವೆಂದು ಸಲಹಿಸುತ್ತಿರುವ ಪ್ರಭೃತಿಗಳಿಗೆ, ಕಳೆದ 67ವರ್ಷಗಳಿಂದ ಚುನಾವಣೆಗಳು ಇದೇ ರೀತಿ ನಡೆಯುತ್ತಿಯೆಂಬುದು ಹೊಳೆಯದೇ ಹೋಯಿತೇ!? ಮುವತ್ತು ವರ್ಷಗಳಿಂದ ಬರೀ ಸಮ್ಮಿಶ್ರ ಸರ್ಕಾರಗಳನ್ನು, ಅವುಗಳ ಅವಾಂತರಗಳನ್ನು, ಅವುಗಳ ಎಡಬಿಡಂಗಿತನದಿಂದ ದೇವೇಗೌಡರೂ ಕೂಡ 13 ತಿಂಗಳು ಪ್ರಧಾನಿಯಾಗಿ ಏನೂ ಮಾಡದಿದ್ದರೂ ‘ನಾನು ಮಣ್ಣಿನ ಮಗ….ನಾನೊಬ್ಬ ಪ್ರಧಾನಿ’ ಎಂದು ಕರೆಸಿಕೊಳ್ಳುವಂತಾದದ್ದನ್ನು ಮರೆತೇ ಹೋದರೇ!? ಹೀಗಿದ್ದಾಗ ಇಷ್ಟು ವರ್ಷದ ನಂತರ ಒಂದು ಪಕ್ಷ ಬಹುಮತ ಪಡೆದಾಗ, ಅಷ್ಟರ ಮಟ್ಟಿಗೆ ದೇಶದ ಜನತೆ ಒಂದಾಗಿ ನಿರ್ಧರಿಸಿದ ಪಕ್ವತೆಯನ್ನೂ ಹೊಗಳಬೇಕೆಂಬುದನ್ನೂ ಮರೆತರೆ!?

ಮೋದಿಗೆ ಬರೀ 31% ಮತಗಳು ಮಾತ್ರ ಬಿದ್ದಿವೆಯೆಂದು ರಚ್ಚೆಹಿಡಿಯುವ ಇವರು, ‘ಬೇರೆ ಅಭ್ಯರ್ಥಿಗಳಿಗೆ ಅಷ್ಟೂ ಮತಗಳು ಬಿದ್ದಿಲ್ಲ’, ‘ಭಾರತದಲ್ಲಿ ಮತದಾನ ಕಡ್ಡಾಯವಲ್ಲ’, ‘ಚುನಾವಣಾ ಆಯೋಗ ಈ ವರ್ಷದ ಚುನಾವಣೆಯಲ್ಲಿ NOTA ಎಂಬ ಹೊಸ ಅಸ್ತ್ರವೊಂದನ್ನು ಮತದಾರನಿಗೆ ಕೊಟ್ಟಿತ್ತು’ ಎಂಬೆಲ್ಲಾ ಸಾಮನ್ಯಜ್ನಾನವನ್ನು AAP ಪಕ್ಷದ ಪೊರಕೆಯಡಿಗೆ ಇಟ್ಟುಬಿಟ್ಟರೇ? ದೇಶದ 31% ಜನ ಮೋದಿಯನ್ನು ಆರಿಸಿದ್ದಾರೆ ಎಂದ ಮಾತ್ರಕ್ಕೆ ‘ಆ 31% ಜನರಿಗೆ ಮಾತ್ರ ಪ್ರಧಾನಿ ಬೇಕಾಗಿದೆ, ಉಳಿದ 69% ಜನರಿಗೆ ವಝೀರ್-ಎ-ಆಝಮ್ ಬೇಕಾಗಿದೆ’ ಎಂದು ಎಲುಬಿಲ್ಲದ ನಾಲಿಗೆಯನ್ನು ಹರಿಬಿಡುವ ಈ ಕತ್ತೆಗಳ ತಲೆಯಲ್ಲಿ ಮೆದುಳಿದೆಯೋ ಅಥವಾ ಬೇರೇನಾದರೂ ತುಂಬಿದೆಯೋ ಎಂಬ ಪ್ರಶ್ನೆ ಹುಟ್ಟುವುದಿಲ್ಲವೇ!? ಇಂತವರಲ್ಲಿ ಒಬ್ಬ ಮಹಾತ್ಮಾ ಗಾಂಧಿಯ ಮೊಮ್ಮಗ ಮತ್ತು ಒಂದು ಕಾಲದಲ್ಲಿ ರಾಜ್ಯಪಾಲನಾಗಿ ಕೆಲಸಮಾಡಿದ್ದ ಎಂದು ಊಹಿಸಿಕೊಂಡರೇ, ಇಂಥವರನ್ನೂ ಬೆಳೆಯಲು ಬಿಟ್ಟ ನಮ್ಮ ವ್ಯವಸ್ತೆಯ ಬಗೆಗೇ ಹೇಸಿಗೆ ಹುಟ್ಟುವುದಿಲ್ಲವೇ!?

ಎಲ್ಲದಿಕ್ಕಿಂತಲೂ ತಮಾಶೆಯೆಂದರೆ, ಮೋದಿಯನ್ನು ಇಷ್ಟೊಂದು ದ್ವೇಷಿಸುವ ಇವರು ಮೋದಿಗೆ ಖಂಡಿತಾ ಮತದಾನ ಮಾಡಿರುವುದಿಲ್ಲ. ಹಾಗಿದ್ದ ಮೇಲೆ ಮೋದಿ ಹೇಗೆ ಏನು ಯಾವಾಗ ಮಾಡಬೇಕೆಂದು ಹೇಳುವ ಕನಿಷ್ಟ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದಾರೆ ಎಂಬ ಅಂಶವನ್ನೂ ಮನಗಾಣದಿದ್ದದ್ದು. ತನಗೆ ಮತ ಹಾಕಿದವರಿಗೆ ಮಾತ್ರ ಮೋದಿ ಪ್ರಧಾನಿಯಲ್ಲ ಎಂಬುದು ನನಗೂ ಗೊತ್ತು. ಆತ ಎಲ್ಲರ ಪ್ರಧಾನಿ. ತನ್ನನ್ನು ಪ್ರೀತಿಸುವವರಿಗೂ, ತನ್ನನ್ನು ದ್ವೇಷಿಸುವವರಿಗೂ, ತನ್ನದೇ ನೆಲದಲ್ಲಿ ತನ್ನನ್ನು ಕೊಲ್ಲಬಯಸುತ್ತಿರುವ ದೇಶದ್ರೋಹಿಗಳಿಗೂ, ದೇಶ ಕೊಟ್ಟಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇದೇ ನೆಲದ ಐಕ್ಯತೆಯನ್ನು ಪ್ರಶ್ನಿಸುತ್ತಿರುವ ವಾರ್ತಾವ್ಯಾಪಾರಿಗಳಿಗೂ, ರಕ್ತಪಿಪಾಸು ನಕ್ಸಲರಿಗೂ ಎಲ್ಲರಿಗೂ ಆತ ಪ್ರಧಾನಿ. ಆದರೆ, ನೀವೇ ಕರೆತಂದು ಕೆಲಸ ಕೊಟ್ಟ ನಿಮ್ಮ ಮನೆಯ ಕೆಲಸಗಾರ ಸರಿಯಿಲ್ಲವೆಂದು ಕೂಗಾಡಿ, ಅತನ ಕೈಯಡುಗೆ ಸರಿಯಿಲ್ಲವೆನ್ನುವುದು ಎಲ್ಲಿಯ ಜಾಣತನ!? ಇಲ್ಲಿ ಅವನಿನ್ನೂ ಅಡುಗೆ ಕೂಡ ಮಾಡಿಲ್ಲ. ಮಾಡುವ ಮೊದಲೇ ಅದು ಸರಿಯಿಲ್ಲ,ಅವನು ಉಪ್ಪು ಕಡಿಮೆ ಹಾಕ್ತಾನೆ, ಲವಂಗ ಹೆಚ್ಚಾಗಿ ಖರ್ಚು ಮಾಡ್ತಾನೆ, ಎಡಗೈಯಿಂದ ಒಗ್ಗರಣ್ಣೆ ಹಾಕಬೇಕು ಅಂದರೆ!!? ಒಂದೋ ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದಿತ್ತು. ಇಲ್ಲಾ…ತೆಗೆದುಕೊಂಡ ತಪ್ಪಿಗೆ ಅವನಿಗೆ ಅಡುಗೆ ಮಾಡಲು ಬಿಡಬೇಕು. ಎರಡೂ ಇಲ್ಲದೆ…. ಇವನೂ ಸರಿಯಿಲ್ಲ, ಇವನ ಅಡುಗೆ ಕೆಟ್ಟದ್ದು, ಇವನನ್ನು ಕೆಲಸ ಕೊಟ್ಟ ಮನೆಯ ಜನರೆಲ್ಲ ಮೂರ್ಖರು ಅಂದರೆ!!??

ಮನೆಯ 31% ಜನರನ್ನು, ಅವರ ನಿರ್ಧಾರವನ್ನು ಅವಮರ್ಯಾದೆ ಮಾಡಬೇಡಿ. ಅವರ ಸಹನೆಗೆ ಮಿತಿ ಇದೆ. ಅದು ಕಳೆದ ದಿನ ನಿಮ್ಮ ವಯಸ್ಸು, ಪ್ರಶಸ್ತಿ ಪಟ್ಟಿ, ಲಿಂಗ, ಜಾತಿ, ಧರ್ಮ, ರಾಷ್ಟ್ರೀಯತೆ ಯಾವುದನ್ನೂ ಲೆಕ್ಕಿಸದೆ ನಿಮ್ಮನ್ನು 31 ದಿಕ್ಕಿಗೆ ಎಸೆಯುತ್ತಾರೆ. ಭಾರತ ನಿರ್ಮಾಣ ಮಾಡುವ ಅವಕಾಶ ಕೊನೆಗೂ ಒದಗಿ ಬಂದಿದೆ. ನಿರ್ಮಾಣ ಮಾಡಲು ಬಿಡಿ ಎಂದು ದಮ್ಮಯ್ಯ ಹಾಕಲೂ ಗೊತ್ತು. ‘ಇಲ್ಲಾ ಈ ದೇಶವನ್ನು ಹರಿದೇ ಸಿದ್ದ’ ಎಂದು ನಿವು ರಚ್ಚೆ ಹಿಡಿದರೆ ನಿಮ್ಮನ್ನೇ ಎಂಟುದಿಕ್ಕಿಗೆ ಹರಿಯಲು ಗೊತ್ತು. ಜೋಪಾನ….

ಕೊನೆಯದಾಗಿ, ನೀವು ಮೋದಿಯನ್ನು ಅಕಾರಣವಾಗಿ ಪ್ರೀತಿಸದಿದ್ದರೂ ಪರವಾಗಿಲ್ಲ, ಕನಿಷ್ಟ ನಿಮ್ಮ ದ್ವೇಷವನ್ನು ಸಕಾರಣಗೊಳಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಮೇಲಿನ ನಮ್ಮ ದ್ವೇಷ ಅಕಾರಣವಾಗುತ್ತದೆ